July 2025

Bhanumathi-ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ

ಕಡೂರು ವೆಂಕಟಲಕ್ಷಮ್ಮ ಹುಟ್ಟಿದ್ದು ೨೯, ಮೇ ೧೯೦೬. ಮೈಸೂರು ಶೈಲಿಯ ನೃತ್ಯ ಅದರಲ್ಲೂ ಅಭಿನಯಕ್ಕೆ ತುಂಬಾ ಹೆಸರುವಾಸಿಯಾಗಿದ್ದವರು. ಅವರ ನೃತ್ಯವನ್ನು, ಬದುಕನ್ನು ಅರ್ಥಮಾಡಿಕೊಳ್ಳಬೇಕೆಂದು ಅವರನ್ನು ಬಲ್ಲ ಕೆಲವರನ್ನು ಸಂದರ್ಶಿಸಲು ಪ್ರಾರಂಭಿಸಿದ್ದೆವು. ಅದೇಕೊ ಮುಂದುವರಿಯಲೇ ಇಲ್ಲ. ಇತ್ತೀಚೆಗೆ ನಮ್ಮನ್ನು ಅಗಲಿದ ಭಾನುಮತಿ ಮೇಡಂ ಅನ್ನು ಸಂದರ್ಶಿಸಿದ್ದೆವು. ಅವರು ಒಂದು ಕಾರ್ಯಾಗಾರ ನಡೆಸಿಕೊಡಲು ಗಾನಭಾರತಿಗೆ ಬಂದಿದ್ದಾಗ ಈ ಸಂದರ್ಶನ ಸಾಧ್ಯವಾಯಿತು. ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ. ನೃತ್ಯಕಲಾವಿದೆ, ಗುರು ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ ಸಂದರ್ಶಕರು ಶೈಲಜ ಮತ್ತು ವೇಣುಗೋಪಾಲ್ ಸುಪ್ರಸಿದ್ಧ […]

Bhanumathi-ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ Read More »

Shivakumar Sharma- ಸಂತೂರ್‌ನ ಸರದಾರ

ಪಂಡಿತ್ ಶಿವಕುಮಾರ್ ಶರ್ಮ ದೀಪಕ್ ರಾಜ   ಸ್ವಾತಂತ್ರ್ಯೋತ್ತರ ಭಾರತದ ಶಾಸ್ತ್ರೀಯ ಸಂಗೀತದ ತೆರೆಯ ಮೇಲೆ ಪ್ರಖರವಾದ ಉಲ್ಕೆಯಂತೆ ಕಾಣಿಸಿಕೊಂಡದ್ದು ಸಂತೂರ್. ಹೇಳಹೆಸರಿಲ್ಲದಂತೆ, ಜನಮಾನಸದಿಂದ ನೇಪಥ್ಯಕ್ಕೆ ಸರಿದುಹೋಗಿದ್ದ ಈ ವಾದ್ಯ ಕೇವಲ ಇಪ್ಪತ್ತೈದು ವರ್ಷಗಳಲ್ಲಿ ಜನಪ್ರಿಯತೆಯ ತುತ್ತತುದಿಗೇರಿತು. ಈಗ ಬಳಕೆಯಿರುವ ವಾದ್ಯಗಳಲ್ಲಿ ಕಡ್ಡಿಯಿಂದ ನುಡಿಸುವ ವಾದ್ಯವೆಂದರೆ ಬಹುಶಃ ಇದೊಂದೇ ಎನಿಸುತ್ತದೆ. ಜಲತರಂಗ್, ಕಾಷ್ಟತರಂಗ್, ತಬಲಾತರಂಗ್ ಮುಂತಾದಂತಹ vertical impact ವಾದ್ಯಗಳಿಗೆ ಹೋಲಿಸಿದರೆ ಸಂತೂರಿನಲ್ಲಿ ನಾದಮಾಧುರ್ಯದ ಸಾಧ್ಯತೆಗಳು ತುಂಬಾ ಹೆಚ್ಚು. ಚರಿತ್ರೆಯಲ್ಲಿ ಎಲ್ಲೋ ಕಳೆದುಹೋಗಿದ್ದ ಈ ವಾದ್ಯವು ಮತ್ತೆ

Shivakumar Sharma- ಸಂತೂರ್‌ನ ಸರದಾರ Read More »

ಆರ್ಥಿಕತೆಯನ್ನು ಅಲ್ಲಾಡಿಸುತ್ತಿರುವ ಕ್ರಿಪ್ಟೊ ವ್ಯವಹಾರ

ಕ್ರಿಪ್ಟೊ ಗುಳ್ಳೆ ಮತ್ತೆ ಒಡೆದಿದೆ. ಕ್ರಿಪ್ಟೊ ಸಾಮ್ರಾಜ್ಯದ ದೊಡ್ಡ ಸಾಮ್ರಾಟ ಸ್ಯಾಂ ಬ್ಯಾಂಕ್‌ಮನ್ ಫ್ರೀಡ್ ದಿವಾಳಿಯಾಗಿದ್ದಾನೆ. ಕಳೆದ ಎರಡು ವರ್ಷಗಳಲ್ಲಿ ೩೦ ವರ್ಷದ ಸ್ಯಾಂ ೩೨ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೊ ವಿನಿಮಯ ಕಂಪೆನಿ ಎಫ್‌ಟಿಎಕ್ಸ್ ಕಟ್ಟಿದ್ದ. ಶೂನ್ಯದಿಂದ ಕೆಲವೇ ದಿನಗಳಲ್ಲಿ ೩ ಟ್ರಿಲಿಯನ್ ಮಾರುಕಟ್ಟೆಯಾಗಿ ಬೆಳೆದಿದ್ದ ಕ್ರಿಪ್ಟೊ ಜಗತ್ತಿನ ಎರಡನೆಯ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದ. ಬೇರೆ ಕ್ರಿಪ್ಟೋ ಉದ್ದಿಮೆಗಳು ಸಂಕಟದಲ್ಲಿದ್ದಾಗ ನೂರಾರು ಮಿಲಿಯನ್ ಹಣ ಖರ್ಚು ಮಾಡಿದ್ದ. ಈಗ ಮತ್ತೆ ಅದು ಶೂನ್ಯಕ್ಕೆ ಹೋಗಲಿದೆಯೇ ಅನ್ನುವ

ಆರ್ಥಿಕತೆಯನ್ನು ಅಲ್ಲಾಡಿಸುತ್ತಿರುವ ಕ್ರಿಪ್ಟೊ ವ್ಯವಹಾರ Read More »

Parama shivan-ಪರಮಶಿವನ್ ಸಂದರ್ಶನ

ಸಂದರ್ಶಿಸಿದವರು – ಎ ರಾಧೇಶ ಮತ್ತು ವೇಣುಗೋಪಾಲ್ ಟಿ ಎಸ್   ನೀವು ನಿಮ್ಮ ಗುರು ದೇವೇಂದ್ರಪ್ಪನವರ ಬಳಿ ಕಲಿತದ್ದರ ಬಗ್ಗೆ ಹೇಳಿ. ನಿಮಗೆ ಸಂಗೀತದ ಗೀಳು ಹತ್ತಿದ್ದರ ಬಗ್ಗೆ ಹೇಳಿ. ಚಾಮುಂಡೇಶ್ವರಿ ಕಂಪನಿಯಲ್ಲಿ ಬಾಲಕನ ಪಾತ್ರ ಮಾಡ್ತಾ ಇದ್ದೆ. ನಾಲ್ಕೈದು ವರ್ಷ. ಕಂಠ ಚೆನ್ನಾಗಿತ್ತು ಅಂತ ಹಾರ್ಮೋನಿಯಂ ಮೇಷ್ಟ್ರು ಸರಿಗಮ ಶುರುಮಾಡಿದ್ರು. ಸರಳೆ ಜಂಟಿ ಅಲಂಕಾರ ಎಲ್ಲವನ್ನೂ ಪಾಠ ಮಾಡಿ, ಅಕಾರ ಉಕಾರಗಳಲ್ಲಿ ಹಾಡಿಸೋರು. ಅಂಕಾರ ಕಷ್ಟ ಅಂತ ಅಂಕಾರ ಮಾಡಿಸೋರು. ಬಾಯಿ ಮುಚ್ಚಿಕೊಂಡು ಮಾಡಬೇಕಿತ್ತು.

Parama shivan-ಪರಮಶಿವನ್ ಸಂದರ್ಶನ Read More »

Rajan Mishra-ಮೌನವಾದ ಬನಾರಸ್ ಪರಂಪರೆಯ ಚಿನ್ನದ ಧ್ವನಿ.

ಪಂಡಿತ್ ರಾಜನ್ ಮಿಶ್ರ ಇನ್ನಿಲ್ಲ. ಜಗತ್ತನ್ನು ಮೋಡಿ ಮಾಡಿದ ಮಿಶ್ರ ಸಹೋದರರಲ್ಲಿ ಒಬ್ಬರನ್ನು ಕೊರೋನ ಬಲಿ ತೆಗೆದುಕೊಂಡಿದೆ. ಇದು ಸಂಗೀತಕ್ಷೇತ್ರಕ್ಕೆ ಒಂದು ದೊಡ್ಡ ಆಘಾತ. ಬನಾರಸ್ ಘರಾನೆಯ ಅಪ್ರತಿಮ ಸಂಗೀತಗಾರನ್ನು ಸಂಗೀತ ಕ್ಷೇತ್ರ ಕಳೆದುಕೊಂಡಿದೆ. ವಾರಣಾಸಿಯ ಸಂಗೀತದ ಮನೆತನದಲ್ಲಿ ರಾಜನ್ ಮಿಶ್ರ ಜನಿಸಿದ್ದು ೧೯೫೧ರಲ್ಲಿ, ಹನುಮಾನ್ ಜಯಂತಿಯಂದು. ಅವರದ್ದು ಬನಾರಸ್ ಘರಾನೆ. ಖಯಾಲ್ ಗಾಯನ ಅಂದರೆ ಹೀಗಿರಬೇಕು ಎಂದು ವ್ಯಾಖ್ಯಾನಿಸಿದ ಘರಾನೆ ಅದು. ನೇಪಾಳದ ಅಸ್ಥಾನ ವಿದ್ವಾಂಸರಾಗಿದ್ದ ಗಾಯನಾಚಾರ್ಯ ಬಡೇ ರಾಂದಾಸ್ ಮಿಶ್ರ ಅದರ ಪ್ರವರ್ತಕರು. ರಾಂದಾಸ್

Rajan Mishra-ಮೌನವಾದ ಬನಾರಸ್ ಪರಂಪರೆಯ ಚಿನ್ನದ ಧ್ವನಿ. Read More »

ಆ ಹಾಡುಗಳು- ಸತ್ಯಜಿತ್ ರೇ

[ಇಂದು ಸತ್ಯಜಿತ್ ರೇ ಬದುಕಿದ್ದರೆ ಅವರಿಗೆ ನೂರು ವರ್ಷ. ಅತ್ಯಂತ ಪ್ರತಿಭಾವಂತ ಕಲಾವಿದರು. ಭಾರತೀಯ ಸಿನಿಮಾಕ್ಕೆ ಜಗತ್ಪ್ರಸಿದ್ಧಿಯನ್ನು ತಂದುಕೊಟ್ಟವರು. ಹಲವು ಕ್ಷೇತ್ರಗಳಲ್ಲಿ ಪ್ರತಿಭೆಯಿದ್ದವರು. ಅವರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಹಲವರು ಅವರ ಕೊಡುಗೆಯನ್ನು ಹಲವು ರೀತಿಗಳಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಸಂಗೀತಕ್ಕೆ ಅವರು ನೀಡಿದ ಕೊಡುಗೆ ಕಡಿಮೆಯೇನಲ್ಲ. ಅವರು ತುಂಬಾ ಇಷ್ಟಪಡುತ್ತಿದ್ದ ಕ್ಷೇತ್ರಗಳಲ್ಲಿ ಸಂಗೀತವೂ ಒಂದು. ಅವರಿಗೆ ಅದರ ಬಗ್ಗೆ ಒಂದು ಸ್ಪಷ್ಟ ಕಲ್ಪನೆಯಿತ್ತು. ಮೊದಲಿಗೆ ರವಿಶಂಕರ್, ಅಲಿ ಅಕ್ಬರ್ ಖಾನ್, ಇಂತಹ ಪ್ರಖ್ಯಾತರೊಂದಿಗೆ ಕೆಲಸ ಮಾಡಿದ

ಆ ಹಾಡುಗಳು- ಸತ್ಯಜಿತ್ ರೇ Read More »

ಬಡವರ ಸಂಖ್ಯೆ ಕಡಿಮೆಯಾಗುತ್ತಿದೆಯೇ?

april, 2022 ಇತ್ತೀಚಿನ ದಿನಗಳಲ್ಲಿ ಬಡತನ ಹಾಗೂ ಅಸಮಾನತೆ ತುಂಬಾ ಸುದ್ದಿ ಮಾಡುತ್ತಿವೆ. ದಿನಪತ್ರಿಕೆಗಳಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳುತ್ತಿವೆ. ಪತ್ರಿಕೆಗಳು ಸಂಪಾದಕೀಯ ಬರೆಯುತ್ತಿವೆ. ತರಾವರಿ ವಿಶ್ಲೇಷಣೆಗಳು ಪ್ರಕಟಗೊಳ್ಳುತ್ತಿವೆ. ‘ಬಡತನ ನಿರ್ಮೂಲನವಾಗಿದೆ’ ಅಂತ ಒಂದು ಸುದ್ದಿ ಹೇಳಿದರೆ. ‘ಬಡತನದ ಪ್ರಮಾಣದಲ್ಲಿ ಎಂದೂ ಇಲ್ಲದ ಹೆಚ್ಚಳ’ ಅಂತ ಮತ್ತೊಂದು ಸುದ್ದಿ ಹೇಳುತ್ತದೆ. ಒಂದೊಂದು ಅಧ್ಯಯನಗಳು ಒಂದೊಂದು ಬಗೆಯ ತೀರ್ಮಾನಕ್ಕೆ ಬರುತ್ತಿವೆ. ಯಾಕೆ ಇಷ್ಟೊಂದು ವೈಪರಿತ್ಯ? ಕಾರಣ ತುಂಬಾ ಸರಳ. ಅಧ್ಯಯನಕ್ಕೆ ಅವು ಬಳಸಿರುವ ಕ್ರಮಗಳು ಬೇರೆ ಬೇರೆ. ಹಾಗೆಯೇ ಅಂಕಿ ಅಂಶಗಳೂ

ಬಡವರ ಸಂಖ್ಯೆ ಕಡಿಮೆಯಾಗುತ್ತಿದೆಯೇ? Read More »

ಮಣಿಪುರ ಹೊತ್ತಿ ಉರಿದಾಗ ಭುಗಿಲೆದ್ದ ಪ್ರಶ್ನೆಗಳು

[ವಾರ್ತಾಭಾರತಿಯಲ್ಲಿ ಪ್ರಕಟವಾದ ಶೈಲಜ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.] ಶೈಲಜ ವೇಣುಗೋಪಾಲ್ ಮಣಿಪುರ ಇಂದು ಹೊತ್ತಿ ಉರಿಯುತ್ತಿದೆ. ಕುಕಿ ಮತ್ತು ಮೈತೈ ಸಮುದಾಯಗಳ ನಡುವಿನ ಅಂತರ್ಯುದ್ಧದಲ್ಲಿ ೬೦,೦೦೦ ಜನ ಮನೆ ಮಠ, ಹಾಗೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ನಿರಾಶ್ರಿತರು, ನಿರ್ಗತಿಕರು, ಅನಾಥರು ಆಗಿದ್ದಾರೆ. ನೆರೆಹೊರೆಯವರು, ಸರ್ಕಾರ, ಪೋಲಿಸ್, ಸೈನ್ಯ ಮತ್ತು ತಮ್ಮ ಸಹಮಾನವರ ಬಗ್ಗೆ ನಿರಂತರ ಭಯ ಹಾಗೂ ಅಪನಂಬಿಕೆಯಲ್ಲಿ ತೊಳಲಾಡುತ್ತಿದ್ದಾರೆ. ೫೦ ದಿನಗಳಿಂದ ಮಣಿಪುರದಲ್ಲಿ ಅಂತರ್ಜಾಲದ ಸಂಪರ್ಕ ಇಲ್ಲವಾಗಿದೆ. ಹರ ಕೊಲ್ಲಲ್ ಪರ ಕಾಯ್ವನೆ ಎಂಬಂತೆ ತಂದೆಯ

ಮಣಿಪುರ ಹೊತ್ತಿ ಉರಿದಾಗ ಭುಗಿಲೆದ್ದ ಪ್ರಶ್ನೆಗಳು Read More »

ಉರುಳುವ ಕಲ್ಲಿನ ನೆನಪಿನ ಸುರುಳಿ

ಡಾ ಎನ್ ಗಾಯತ್ರಿಯವರು ಅನುವಾದಿಸಿರುವ ವೀಣಾ ಮಜುಂದಾರ್ ಅವರ ಆತ್ಮಕಥಾನಕ ಮೆಮೊರಿಸ ಆಫ್ ಅ ರೋಲಿಂಗ್ ಸ್ಟೋನ್ ಕೃತಿಯ ಕನ್ನಡ ಅನುವಾದ ’ಉರುಳುವ ಕಲ್ಲಿನ ನೆನಪಿನ ಸುರುಳಿ’ ಕೃತಿಯ ಪರಿಚಯವನ್ನು ಹಂಚಿಕೊಳ್ಳುತ್ತಿದ್ದೇವೆ. ಇದು ಈ ತಿಂಗಳ ಹೊಸತುವಿನಲ್ಲಿ ಪ್ರಕಟವಾಗಿದೆ. ಸಮಾನತೆ ಮತ್ತು ಪ್ರಜಾಪ್ರಭುತ್ವದ ಅಪರೂಪದ ದಾಖಲೆ ವೀಣಾ ಮಜುಂದಾರ್ ಅವರ ಆತ್ಮಕಥೆ ಖ್ಯಾತ ಸಮಾಜಶಾಸ್ತ್ರಜ್ಞೆ, ಮಹಿಳಾ ಅಧ್ಯಯನದ ಹರಿಕಾರ್ತಿ, ಭಾರತದಲ್ಲಿ ಮಹಿಳಾ ಚಳುವಳಿಯ ದಾಖಲಾತಿದಾರಳು ಮತ್ತು ದಕ್ಷಿಣ ಏಷ್ಯಾದಲ್ಲಿ ಮಹಿಳಾ ಅಧ್ಯಯನದ ಅಜ್ಜಿ, ಮತ್ತೆ ಇನ್ನೂ ಏನೇನೋ

ಉರುಳುವ ಕಲ್ಲಿನ ನೆನಪಿನ ಸುರುಳಿ Read More »

Venkatappa K -ಕುಂಚ ಹಿಡಿದ ಕೈ ಮೀಟಿದ ತಂತಿ

[ಕೆ ವೆಂಕಟಪ್ಪನವರು ಹೆಸರಾಂತ ಕಲಾವಿದರು, ಶಿಲ್ಪಕಲಾವಿದರು. ಅವರಿಗೆ ಅಷ್ಟೇ ಪರಿಶ್ರಮ ಸಂಗೀತದಲ್ಲಿಯೂ ಇತ್ತು. ವೀಣೆಯನ್ನು ಶೇಷಣ್ಣನವರ ಬಳಿ ಕಲಿತಿದ್ದರು. ಶಾಸ್ತ್ರದ ತಿಳುವಳಿಕೆಯೂ ಇತ್ತು. ಅವರ ಸಂಗೀತದ ಆಯಾಮದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅವರು ವೇದಿಕೆ ಕಲಾವಿದರಾಗಲು ಕಲಿತವರಲ್ಲ. ಆತ್ಮಸಂತೋಷಕ್ಕಾಗಿ ನುಡಿಸಿಕೊಳ್ಳುತ್ತಿದ್ದವರು. ವಿ ಸೀತಾರಾಮಯ್ಯ, ಎಸ್ ಕೆ ರಾಮಚಂದ್ರರಾಯರು ಅವರ ಸಂಗೀತದ ಬಗ್ಗೆ ಬರೆದಿದ್ದಾರೆ. ಅವರನ್ನು ನಿಕಟವಾಗಿ ಬಲ್ಲ ಬಿ ಜಿ ಎಲ್ ಸ್ವಾಮಿಯವರು ಒಂದು ಸೊಗಸಾದ ಲೇಖನವನ್ನು ಬರೆದಿದ್ದಾರೆ. ಜೊತೆಗೆ ವೆಂಕಟಪ್ಪನವರ ಡೈರಿಯು ವೆಂಕಟಪ್ಪ: ಸಮಕಾಲೀನ ಪುನರವಲೋಕನ

Venkatappa K -ಕುಂಚ ಹಿಡಿದ ಕೈ ಮೀಟಿದ ತಂತಿ Read More »