July 2025

ಬದಲಾಗುತ್ತಾ ಬೆಳೆದ ಮೃಣಾಲ್ ಸೇನ್

ಟಿ ಎಸ್ ವೇಣುಗೋಪಾಲ್  ಹುಟ್ಟಿದ್ದು ಪೂರ್ವ ಬಂಗಾಲದಲ್ಲಿ. ಅಮೇಲೆ ಓದು ಮುಂದುವರೆಸಲು ಪಶ್ಚಿಮ ಬಂಗಾಳಕ್ಕೆ ಬಂದರು. ಬಂಗಾಳದ ವಿಭಜನೆಯ ನೋವು ಅವರನ್ನು ಗೀಳಾಗಿ ಕಾಡಲಿಲ್ಲ. ಕೊಲ್ಕತ್ತಾದಲ್ಲಿ ಬೆರೆತು ಕೊಲ್ಕತ್ತದವರೇ ಆಗಿಬಿಟ್ಟರು. ಜೀವನದುದ್ದಕ್ಕೂ ಅವರ ಕಾಳಜಿಯೆಲ್ಲಾ ಕೊಲ್ಕತ್ತಾ ಮತ್ತು ಅಲ್ಲಿಯ ಜನರ ಬಗ್ಗೆಯೇ ಆಗಿತ್ತು. ಕೊಲ್ಕತ್ತಾ ಅವರಿಗೆ ಸ್ಪೂರ್ತಿಯ ತಾಣವಾಗಿದ್ದಂತೆಯೇ ಕಿರಿಕಿರಿಯೂ ಜಾಗವೂ ಆಗಿತ್ತು. ತಮ್ಮ ಸುತ್ತಲ ಆಗುಹೋಗುಗಳ ಕುರಿತಂತೆ ಸದಾ ಅವರಿಗೆ ಒಂದು ರೀತಿಯ ಅತೃಪ್ತಿ ಕಾಡುತ್ತಿತ್ತು. ಈ ಅತೃಪ್ತಿಯನ್ನು ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಪಡಿಸುತ್ತಲೇ ಇದ್ದರು. […]

ಬದಲಾಗುತ್ತಾ ಬೆಳೆದ ಮೃಣಾಲ್ ಸೇನ್ Read More »

ಸುಬ್ಬರಾಯನಕೆರೆಯ ಉರುಫ್ ಫ್ರೀಡಂ ಪಾರ್ಕ್‌ನ ಸ್ವಗತ

[ಈ ಲೇಖನವನ್ನು ಸದ್ವಿದ್ಯಾ ಸಂಸ್ಥೆಯವರು ಹೊರತಂದಿರುವ ಸ್ಮರಣ ಸಂಚಿಕೆಗಾಗಿ ಶೈಲಜಾ ಬರೆದದ್ದು. ಇದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.] ನನ್ನ ಕಥೆ ನನ್ನ ವ್ಯಥೆ ಮೊದಲು ಈಗ ನಾನಿರೋ ಜಾಗ ಏನಾಗಿತ್ತೋ ತಿಳಿಯದು. ಮುಮ್ಮಡಿ ಕೃಷ್ಣರಾಜ ಒಡೆಯರ್ (೧೭೯೪-೧೮೬೮) ಅವರ ಕಾಲದಲ್ಲಿ ಜನ ಮತ್ತು ಜಾನುವಾರುಗಳಿಗೆ ನೀರಿನ ಅನುಕೂಲ ಇರಲಿ ಎಂದು ೧೮೬೫ರಲ್ಲಿ ಸುಬ್ಬರಾಯನ ಕಟ್ಟೆಯಾಗಿ ನಾನು ಹುಟ್ಟಿದೆ. ನನ್ನ ಪಕ್ಕದಲ್ಲಿಯೇ ಒಂದು ಕುಡಿಯುವ ನೀರಿನ ಬಾವಿಯೂ ಇತ್ತು. ೧೮೭೦-೭೫ರ ಹೊತ್ತಿಗೆ ನಾನು ಸುಬ್ಬರಾಯನ ಕೆರೆಯಾದೆ. ನನಗ್ಯಾಕೆ ಈ ಹೆಸರು

ಸುಬ್ಬರಾಯನಕೆರೆಯ ಉರುಫ್ ಫ್ರೀಡಂ ಪಾರ್ಕ್‌ನ ಸ್ವಗತ Read More »

ಯಂತ್ರಗಳನ್ನು ಕಳಚಬೇಕೆ?

ಗಾಂಧಿಯನ್ನು ಹಲವು ಜನ ಹಲವು ರೀತಿಯಲ್ಲಿ ಅರ್ಥಮಾಡಿಕೊಂಡಿದ್ದಾರೆ. ಅದು ಸಹಜ ಕೂಡ. ಗಾಂಧಿ ಮಾತುಗಳು ಎಷ್ಟೋ ಬಾರಿ ಗೋಜಲು ಗೋಜಲಾಗಿ ಕಾಣುತ್ತದೆ. ಇಂದು ಮಾತನಾಡಿದ್ದಕ್ಕಿಂತ ನಾಳೆ ಭಿನ್ನವಾಗಿ ಮಾತನಾಡಿರುತ್ತಾರೆ. ಅಥವಾ ಹಾಗೆ ತೋರುತ್ತದೆ. ಅಂದಿನ ಸಂದರ್ಭ ಬೇರೆಯಿತ್ತು ಅದಕ್ಕೆ ಹಾಗೆ ಮಾತನಾಡಿದ್ದಾರಾ, ಇರಬಹುದು. ಅಥವಾ ಅವರ ಅಭಿಪ್ರಾಯ ಬದಲಾಗಿದ್ದಿರಬಹುದೇ ಅದೂ ಇರಬಹುದು. ಹಾಗಾಗಿ ಗಾಂಧಿ ಒಂದು ವಿಷಯದ ಬಗ್ಗೆ ಹೀಗೆ ಹೇಳಿದ್ದಾರೆ ಅಂತ ಹೇಳಿದರೆ ಇನ್ನೊಬ್ಬರು ಬೇರೆ ಉಲ್ಲೇಖಗಳನ್ನು ನೀಡಿ ಗಾಂಧಿಯನ್ನು ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಇನ್ನೂ

ಯಂತ್ರಗಳನ್ನು ಕಳಚಬೇಕೆ? Read More »

ಗಾಂಧಿ, ಕುಮಾರಪ್ಪ ಹಾಗೂ ಇಂದು

ರಾಷ್ಟ್ರಪತಿ ಭವನದಲ್ಲಿ ಯೋಜನಾ ಆಯೋಗದ ಸಲಹಾ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಜೆ ಸಿ ಕುಮಾರಪ್ಪನವರು ಟಾಂಗದಲ್ಲಿ ಅಲ್ಲಿಗೆ ಬರುತ್ತಿದ್ದರು. ಜವಹರಲಾಲ್ ಅವರ ಕಾರು ಆ ಹಾದಿಯಲ್ಲೇ ಬರಬೇಕಾದ್ದರಿಂದ ಟಾಂಗವನ್ನು ರಸ್ತೆಯ ಆಚೆಗೆ ತೆಗೆಯಲು ಹೇಳಿದರು. ಸಿಟ್ಟಾದ ಕುಮಾರಪ್ಪನವರು ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮುಂದಿನ ಬಾರಿ ತಾನು ಎತ್ತಿನಗಾಡಿಯಲ್ಲಿ ಬರುವುದಾಗಿ ಹೇಳಿದರು. ಪ್ರಜಾಸತ್ತೆಯಲ್ಲಿ ಪ್ರಧಾನ ಮಂತ್ರಿಯೂ ಒಂದೇ, ಎತ್ತಿನ ಗಾಡಿ ಓಡಿಸುವವನೂ ಒಂದೇ ಎಂದರು. ನೆಹರು ಕುಮಾರಪ್ಪನವರನ್ನು ಸಮಾಧಾನ ಪಡಿಸುತ್ತಾ ಆ ರಸ್ತೆಯಲ್ಲಿ ಮಿಲಿಟರಿ ವಾಹನಗಳು ಹೆಚ್ಚಾಗಿ

ಗಾಂಧಿ, ಕುಮಾರಪ್ಪ ಹಾಗೂ ಇಂದು Read More »

ಕಾಪ್ ೨೮ ಹವಾಮಾನದ ಬಿಸಿಯನ್ನು ತಣಿಸಬಲ್ಲದೆ?

ಸಂಯುಕ್ತ ರಾಷ್ಟ್ರಗಳ ಹವಾಮಾನ ಬದಲಾವಣೆಯ ೨೮ನೇ ಸಮ್ಮೇಳನ ಅಥವಾ ಕಾನ್ಪರೆನ್ಸ್ ಆಫ್ ಪಾರ್ಟಿಸ್- ಸಿಒಪಿ೨೮ ದುಬೈನ ಎಕ್ಸಪೊ ಸಿಟಿಯಲ್ಲಿ ನಡೆಯುತ್ತಿದೆ. ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಹವಾಮಾನದ ಬದಲಾವಣೆಯ ಪರಿಣಾಮವನ್ನು ತಗ್ಗಿಸುವ ನಿಟ್ಟಿನಿಂದ ನೀತಿಗಳನ್ನು ರೂಪಿಸಲು ಎಲ್ಲಾ ದೇಶಗಳು ಸೇರಿವೆ. ಪರಿಸರಕ್ಕೆ ಕಾರ್ಬನ್ ಡೈಆಕ್ಸೈಡ್ ಸೇರ್ಪಡೆಯ ಪ್ರಮಾಣವನ್ನು ತಗ್ಗಿಸುವುದು, ನವೀಕರಿಸಬಹುದಾದ ಇಂಧನದ ಬಳಕೆಯನ್ನು ಹಾಗೂ ಇಂಧನದ ಕ್ಷಮತೆಯನ್ನು ಹೆಚ್ಚಿಸುವುದು, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸುವುದು, ಸಂಪನ್ಮೂಲವನ್ನು ಕ್ರೋಡೀಕರಿಸುವುದು ಈ ಬಗ್ಗೆ ಚರ್ಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿದೆ. ಸಿಒಪಿ ಸಮ್ಮೇಳನ

ಕಾಪ್ ೨೮ ಹವಾಮಾನದ ಬಿಸಿಯನ್ನು ತಣಿಸಬಲ್ಲದೆ? Read More »

ಕಾನ್ಸಂಟ್ರೇಷನ್ ಕ್ಯಾಂಪ್ ಎಂಬ ಸಾವಿನ ಲೋಕ.

ಮಾನವ ಕ್ರೌರ್ಯದ ವೈವಿಧ್ಯಗಳು.   ೧೯೭೬ರಿಂದ ೧೯೮೧ರ ಅವಧಿಯಲ್ಲಿ ಇತಿಹಾಸ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಓದುವಾಗ ನನ್ನನ್ನು ಪದೇ ಪದೇ ಕಾಡಿ, ಕಲಕಿ, ನಿದ್ದೆ ಕೆಡಿಸಿದ್ದು ಯಹೂದಿಗಳ ಸಾಮೂಹಿಕ ಕಗ್ಗೊಲೆ ಮತ್ತು ಸಿನಿಮಾಗಳಲ್ಲಿ ನೋಡಿದ್ದ ಕಾನ್ಸಂಟ್ರೇಷನ್ ಕ್ಯಾಂಪಿನ ಕ್ರೌರ್ಯ. ಯುರೋಪಿಗೆ ಹೋಗಬೇಕು, ಅವುಗಳನ್ನು ನಾನೇ ಸ್ವತಃ ನೋಡಬೇಕು ಎನ್ನುವುದು ನನ್ನ ಬಹು ದೊಡ್ಡ ಆಸೆಯಾಗಿತ್ತು. ಆದರೆ ಅದಕ್ಕಾಗಿ ನಾನು ನಿವೃತ್ತಳಾಗುವ ತನಕ, ಅಂದರೆ, ೩೮ ವರ್ಷಗಳು ಕಾಯಬೇಕಾಯಿತು. ೨೦೧೮ರಲ್ಲಿ ಬರ್ಲಿನ್ ಸಮೀಪದ ಸ್ಯಾಕ್ಸನ್ ಹೌಸೆನ್ ಮತ್ತು ೨೦೨೩ರಲ್ಲಿ

ಕಾನ್ಸಂಟ್ರೇಷನ್ ಕ್ಯಾಂಪ್ ಎಂಬ ಸಾವಿನ ಲೋಕ. Read More »

ಬಜೆಟ್ ಹಾಗೂ ವಿತ್ತೀಯ ಕೊರತೆ

ಬಜೆಟ್ -2024 ಹಲವು ಪತ್ರಿಕೆಗಳಲ್ಲಿ ಚುನಾವಣೆ ಹತ್ತಿರದಲ್ಲಿದ್ದರೂ ದೊಡ್ಡ ಘೋಷಣೆಗಳನ್ನು ಬಜೆಟ್ಟಿನಲ್ಲಿ ಮಾಡಿಲ್ಲ ಅನ್ನುವ ಅಭಿಪ್ರಾಯವನ್ನು ಪ್ರಕಟಿಸಿವೆ. ಇದು ಚುನಾವಣಾ ವರ್ಷವಾಗಿರುವುದರಿಂದಲೇ ದೊಡ್ಡ ದೊಡ್ಡ ಭರವಸೆಗಳನ್ನು ಕೊಡಲು ಸಾಧ್ಯವಿಲ್ಲ ಅನ್ನುವುದನ್ನು ಗಮನಿಸಬೇಕು. ಈ ಸಮಯದಲ್ಲಿ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ಟನ್ನು ಮಂಡಿಸುವುದಿಲ್ಲ. ಚುನಾವಣೆಯ ನಂತರ ಸರ್ಕಾರ ಬದಲಾಗುವ ಸಾಧ್ಯತೆಗಳು ಇರುವುದರಿಂದ ಕೇವಲ ಮಧ್ಯಂತರ ಬಜೆಟ್ಟನ್ನು ಮಂಡಿಸಬಹುದು. ಆದರೆ ಮಧ್ಯಂತರ ಬಜೆಟ್ಟಿಗೆ ಸಂವಿಧಾನದಲ್ಲಿ ಅವಕಾಶವಿಲ್ಲದೇ ಇರುವುದರಿಂದ ಸರ್ಕಾರ ಚುನಾವಣೆಯ ಪ್ರಕ್ರಿಯೆ ಮುಗಿಯುವ ತನಕ ಆಡಳಿತ ನಡೆಸುವುದಕ್ಕಾಗಿ ಬೇಕಾದ ಹಣದ

ಬಜೆಟ್ ಹಾಗೂ ವಿತ್ತೀಯ ಕೊರತೆ Read More »

ಬಜೆಟ್ಟನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ-2024-1

ಚುನಾವಣೆಯ ವರ್ಷದಲ್ಲಿ ಪೂರ್ಣ ಪ್ರಮಾಣದ ಬಜೆಟ್ಟನ್ನು ಮಂಡಿಸುವುದಿಲ್ಲ. ಮುಂದಿನ ಸರ್ಕಾರ ಅಧಿಕಾರವಹಿಸಿಕೊಳ್ಳುವವರೆಗೆ ಸರ್ಕಾರಕ್ಕೆ ಅವಶ್ಯಕ ಖರ್ಚನ್ನು ಭರಿಸಲು ಅನುಕೂಲವಾಗುವ ಉದ್ದೇಶದಿಂದ ಮಂಡಿಸುವ ಮಧ್ಯಂತರ ಬಜೆಟ್ ಇದು. ಇದರಲ್ಲಿ ಯಾವುದೇ ಪ್ರಮುಖ ನೀತಿಯನ್ನು ಘೋಷಿಸುವುದಕ್ಕೆ ಚುನಾವಣಾ ನೀತಿಯ ಪ್ರಕಾರ ಅವಕಾಶವಿರುವುದಿಲ್ಲ. ಅದು ಚುನಾವಣೆಯ ಫಲಿತಾಂಶವನ್ನು ಪ್ರಭಾವಿಸುತ್ತದೆ ಅನ್ನುವ ಕಾರಣಕ್ಕಾಗಿ ಹಾಗೆ ಮಾಡಲಾಗುತ್ತದೆ. ಹೆಚ್ಚೆಂದರೆ ಸರ್ಕಾರ ಈ ಸಮಯದಲ್ಲಿ ತನ್ನ ಕಳೆದ ವರ್ಷದ ಅಥವಾ ಕಳೆದ ಹತ್ತು ವರ್ಷದ ಸಾಧನೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡಬಹುದು. ಹಾಗೆಯೇ ಸಾಮಾನ್ಯವಾಗಿ

ಬಜೆಟ್ಟನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ-2024-1 Read More »

ಎಂಎಸ್‌ಪಿ ಜಾರಿಯಾದರೆ ಸರ್ಕಾರ ದೀವಾಳಿಯಾಗಿಬಿಡುತ್ತದಾ?

T S Venugopal ಎಂಎಸ್‌ಪಿ ಅಂದರೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ೧೯೬೦ರಲ್ಲಿ ಪ್ರಾರಂಭವಾಯಿತು. ರೈತರ ಸ್ಥಿತಿ ಸುಧಾರಿಸುವ ಉದ್ದೇಶದಿಂದ ಯುಪಿಎ ಸರ್ಕಾರ ಎಂ ಎಸ್ ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕೃಷಿ ಆಯೋಗವನ್ನು ರಚಿಸಿತ್ತು. ಅದು ಐದು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಅದರಲ್ಲಿ ಎಂಎಸ್‌ಪಿಯನ್ನು ನಿಗದಿಪಡಿಸುವುದಕ್ಕೆ ಸಮಗ್ರ ಉತ್ಪಾದನಾ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಬೇಕೆಂಬ ಉಲ್ಲೇಖ ಬರುತ್ತದೆ. ಎಂಎಸ್‌ಪಿ ಲೆಕ್ಕಚಾರ ಮಾಡುವಾಗ ಸಮಗ್ರ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದು ಮೊದಲ ಬಾರಿಗೆ ಪ್ರಸ್ತಾಪನೆಗೆ ಬರುವುದು ಅಭಿಜಿತ್ ಸೇನ್

ಎಂಎಸ್‌ಪಿ ಜಾರಿಯಾದರೆ ಸರ್ಕಾರ ದೀವಾಳಿಯಾಗಿಬಿಡುತ್ತದಾ? Read More »

Rashid Khan -ರಶೀದ್ ಖಾನ್

ನೀವಿಷ್ಟು ಬೇಗ ಹೋಗಬಾರದಿತ್ತು ಉಸ್ತಾದರೇ. ಒಮ್ಮೆ ಸಂದರ್ಶನವೊಂದರಲ್ಲಿ ಹಿಂದೂಸ್ತಾನಿ ಸಂಗೀತದ ಭವಿಷ್ಯದ ಬಗ್ಗೆ ಭೀಮಸೇನ ಜೋಷಿಯನ್ನು ಕೇಳಿದಾಗ ಹಿಂದುಸ್ತಾನಿ ಸಂಗೀತದ ಭವಿಷ್ಯ ರಶೀದ್ ಖಾನ್ ಅಂದಿದ್ದರು. ಅಷ್ಟೇ ಅಲ್ಲ ತನ್ನೊಂದಿಗೆ ಜುಗಲ್‌ಬಂದಿಯನ್ನು ಹಾಡಲು ಆಹ್ವಾನಿಸಿದ್ದರು. ರಷೀದ್ ಖಾನ್ ತುಂಬಾ ಸಣ್ಣ ವಯಸ್ಸಿನಲ್ಲೇ ಅಷ್ಟೊಂದು ಭರವಸೆ ಮೂಡಿಸಿದ್ದರು. ಅವರು ಕಲ್ಕತ್ತೆಯಲ್ಲಿ ತಮ್ಮ ಮೊದಲ ಕಚೇರಿ ಮಾಡಿದಾಗ ಅವರಿಗೆ ಕೇವಲ ೧೧ ವರ್ಷಗಳು. ಅಂದು ಅವರು ಹಾಡಿದ್ದು ಪಟದೀಪ್ ರಾಗದ ಬಂದಿಶ್. ಆ ಸಂಗೀತೋತ್ಸವದಲ್ಲಿ ಹಿಂದುಸ್ತಾನಿ ಸಂಗೀತದ ದಿಗ್ಗಜರೆಲ್ಲರೂ ಇದ್ದರು.

Rashid Khan -ರಶೀದ್ ಖಾನ್ Read More »