ಯಾವ ಹಾಡಿಗೆ ಯಾವ ರಾಗ? ನಾಡಗೀತೆ ವಿವಾದದ ಸುತ್ತಮುತ್ತ

ಶೈಲಜಾ ಕರ್ನಾಟಕದ ನಾಡಗೀತೆ ವಿವಾದ ಇಂದು ಹೈಕೋರ್ಟ್ ಮೆಟ್ಟಲೇರಿರುವುದು ಸಾಕಷ್ಟು ದೊಡ್ಡ ಸುದ್ದಿ. ಗೀತೆಯೊಂದನ್ನು ಹೀಗೇ ಹಾಡಬೇಕು ಎಂದು ಸರ್ಕಾರ ನಿರ್ದೇಶಿಸುವುದು ಸಂಗೀತ ಕಲಾವಿದರ ಸ್ವಾತಂತ್ರ್ಯವನ್ನು ಅಪಹರಿಸುತ್ತದೆ. ಏಕೆಂದರೆ ತಮ್ಮ ಮನಸ್ಸಿಗೆ ಇಷ್ಟ ಬಂದಂತೆ ಕಲೆಯನ್ನು ನಿರೂಪಿಸುವ ಕಲಾವಿದನ ಸ್ವಾತಂತ್ರ್ಯವನ್ನು ಇದು ಉಲ್ಲಂಘಿಸುತ್ತದೆ. ಈ ವಾದ ಹಲವು ಗಂಭೀರ ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತದೆ. ಉದಾಹರಣೆಗೆ, ಕಲಾವಿದ, ರಚನಕಾರ, ವಾಗ್ಗೇಯಕಾರ, ಸಂಗೀತ ಸಂಯೋಜಕ ಮತ್ತು ಸಂಗೀತದ ನಡುವಿನ ಪರಸ್ಪರ ಸಂಬಂಧ; ಹಾಗೆಯೇ ಪ್ರಜೆಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ನಾಡಿನ […]

ಯಾವ ಹಾಡಿಗೆ ಯಾವ ರಾಗ? ನಾಡಗೀತೆ ವಿವಾದದ ಸುತ್ತಮುತ್ತ Read More »

ವದಂತಿಗಳ ಹರಡುವಿಕೆಯನ್ನು ತಡೆಗಟ್ಟುವಿಕೆ

  ದ ಹಿಂದು, ಏಪ್ರಿಲ್ ೧೫, ೨೦೨೦ ರಾಜೀವ್ ಭಾರ್ಗವ   ೧೯೮೪ರಲ್ಲಿ ಸಿಖ್‌ವಿರೋಧಿ ಅಲೆ ಇಡೀ ದೆಹಲಿಯನ್ನು ಆವರಿಸಿಕೊಂಡಿತ್ತು. ದೆಹಲಿಯಲ್ಲಿ ಸರಬರಾಜಾಗುವ ಕುಡಿಯುವ ನೀರಿಗೆ ಸಿಖ್ಖರು ವಿಷ ಹಾಕಿಬಿಟ್ಟಿದ್ದಾರೆ ಎಂಬ ದಟ್ಟವಾದ ವದಂತಿ ನಗರದಲ್ಲೆಲ್ಲಾ ಹರಡಿತ್ತು. ಇಂತಹ ವದಂತಿಗಳು ಹೊಸತೇನಲ್ಲ. ಯುರೋಪಿನಲ್ಲಿ ಯುದ್ಧಗಳು, ಸಾಂಕ್ರಾಮಿಕ ರೋಗಗಳು ಮತ್ತು ಅಂತರ್ಯುದ್ಧಗಳು ಆದಾಗೆಲ್ಲಾ ಭಾವಿಗೆ ವಿಷಹಾಕಿದ್ದಾರೆ ಎಂದು ಹಲವು ಶತಮಾನಗಳ ಕಾಲ ಯಹೂದಿಗಳನ್ನು ಆಪಾದಿಸುತ್ತಿದ್ದರು. ೧೮ನೇ ಶತಮಾನದ ಕೊನೆಯ ಭಾಗದಲ್ಲಿ ಪ್ಯಾರಿಸ್ಸಿನಲ್ಲಿ ಶ್ರೀಮಂತರು-ಬಡವರ ನಡುವೆ ವರ್ಗವೈಷಮ್ಯ ತುಂಬಾ ತೀವ್ರವಾಗಿತ್ತು.

ವದಂತಿಗಳ ಹರಡುವಿಕೆಯನ್ನು ತಡೆಗಟ್ಟುವಿಕೆ Read More »

ಭಾರತದ ಮುಂದಿರುವ ಅತಿದೊಡ್ಡ ಸವಾಲು ರಘುರಾಂ ರಾಜನ್

ಏಪ್ರಿಲ್ ೨೦೨೦ ಅನುವಾದ: ಟಿ ಎಸ್ ವೇಣುಗೋಪಾಲ್ ಆರ್ಥಿಕತೆಯ ದೃಷ್ಟಿಯಿಂದ ಮಾತನಾಡುವುದಾದರೆ, ಸ್ವಾತಂತ್ರ್ಯದ ನಂತರ ಇಂದು ಭಾರತ, ಅತಿದೊಡ್ಡ ತುರ್ತುಪರಿಸ್ಥಿಯನ್ನು ಎದುರಿಸುತ್ತಿದೆ. ೨೦೦೮-೦೯ರ ಜಗತ್ತನ್ನು ಕಾಡಿದ ಹಣಕಾಸು ಬಿಕ್ಕಟ್ಟಿನಿಂದ ಬೇಡಿಕೆಗೆ ಬಲವಾದ ಪೆಟ್ಟುಬಿದ್ದಿತ್ತು. ಆದರೂ ಕೆಲಸಗಾರರು ಕೆಲಸಕ್ಕೆ ಹೋಗುತ್ತಿದ್ದರು. ಬಿಕ್ಕಟ್ಟು ಕಳೆದ ಕೆಲವೇ ವರ್ಷಗಳಲ್ಲಿ ನಮ್ಮ ಉದ್ದಿಮೆಗಳು ಚೇತರಿಸಿಕೊಂಡವು. ನಮ್ಮ ಹಣಕಾಸು ವ್ಯವಸ್ಥೆ ಸುಮಾರಾಗಿ ಸುಸ್ಥಿತಿಯಲ್ಲೇ ಇತ್ತು. ಸರ್ಕಾರದ ಹಣಕಾಸು ಸ್ಥಿತಿಯೂ ಆರೋಗ್ಯವಾಗಿಯೇ ಇತ್ತು. ಆದರೆ ಇಂದು ಪರಿಸ್ಥಿತಿ ಅದಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಕೊರೋನ ಮಹಾಮಾರಿ ನಮ್ಮನ್ನು

ಭಾರತದ ಮುಂದಿರುವ ಅತಿದೊಡ್ಡ ಸವಾಲು ರಘುರಾಂ ರಾಜನ್ Read More »

ಇಂಗಮರ್ ಬರ್ಗಮನ್

  ಇಂಗಮರ್ ಬರ್ಗಮನ್ ಚಲನಚಿತ್ರ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವನು ಇಡೀ ಬದುಕನ್ನು ರಂಗಭೂಮಿ ಹಾಗೂ ಸಿನಿಮಾಕ್ಕೆ ಮೀಸಲಿಟ್ಟಿದ್ದ. ಅವನೊಬ್ಬ ಹುಟ್ಟು ಚಿತ್ರ ನಿರ್ದೇಶಕ. ಮಾಧ್ಯಮವನ್ನು ಚೆನ್ನಾಗಿ ಬಲ್ಲವನು. ತಾನೊಬ್ಬ ಒಳ್ಳೆ ನಿರ್ದೇಶಕ ಎಂಬ ಅರಿವು ಅವನಿಗೂ ಇತ್ತು. ಆದರೂ ಸಿನಿಮಾ ಕೆಲಸ ಪ್ರಾರಂಭವಾದರೆ ಅದು ಮುಗಿಯುವವರೆಗೆ ತಳಮಳ ಅವನಿಗೂ ತಪ್ಪಿದ್ದಲ್ಲ. ಸಿನಿಮಾದ ಮೊದಲ ಹೆಜ್ವೆಯಲ್ಲೇ ಈ ಒದ್ದಾಟ ಶುರುವಾಗುತ್ತದೆ. ಕೆಲವು ವಸ್ತುಗಳು ಬೇಗ ಸಿಕ್ಕು ಬಿಡಿಸಿಕೊಂಡು ಕಲಾಕೃತಿಗಳಾಗಿಬಿಡುತ್ತವೆ. ಕೆಲವು ತುಂಬಾ ಕಾಲ ಹೆಣಗುತ್ತವೆ. ಇದು ಅವನಿಗೆ

ಇಂಗಮರ್ ಬರ್ಗಮನ್ Read More »

ಭಾರತದಲ್ಲಿ ಸತ್ಯ ಜನಗಳ ನಡುವೆ ದೊರಕುತ್ತದೆ ಗಾಯಕ ಟಿ ಎಂ ಕೃಷ್ಣ ಮತ್ತು ಅಶೋಕನ ಶಾಸನಗಳು

ಭಾರತದಲ್ಲಿ ಸತ್ಯ ಜನಗಳ ನಡುವೆ ದೊರಕುತ್ತದೆ ಗಾಯಕ ಟಿ ಎಂ ಕೃಷ್ಣ ಮತ್ತು ಅಶೋಕನ ಶಾಸನಗಳು ಶೈಲಜ   ೨೦೨೧ರಲ್ಲಿ ಗಾಯಕ ಟಿ.ಎಂ ಕೃಷ್ಣ ಅಶೋಕ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಅಶೋಕನ ಶಿಲಾಶಾಸನಗಳನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿ ಹಾಡುವ ಯೋಜನೆಯೊಂದನ್ನು ಹಾಕಿಕೊಂಡರು. ಬಹುಶಃ ಅಂತಹ ಪ್ರಯತ್ನವೊಂದನ್ನು ಈ ತನಕ ಯಾರೂ ಮಾಡಿದಂತಿಲ್ಲ. ಅವು ಸುಮಾರು ೨೨೦೦ ವರ್ಷಗಳಷ್ಟು ಪುರಾತನವಾದ (ಕ್ರಿ.ಪೂ. ೨೬೮-೨೩೨) ಶಿಲಾಶಾಸನಗಳು. ಅವುಗಳಲ್ಲಿ ಇವರಿಗೇಕೆ ಅಷ್ಟೊಂದು ಆಸಕ್ತಿ ಮೂಡಿತು? ಅವನ್ನು ಹಾಡೋದಕ್ಕೆ ಇವರಿಗೇಕೆ ಅಷ್ಟೊಂದು ಉತ್ಸಾಹ? ಇಂದಿಗೆ

ಭಾರತದಲ್ಲಿ ಸತ್ಯ ಜನಗಳ ನಡುವೆ ದೊರಕುತ್ತದೆ ಗಾಯಕ ಟಿ ಎಂ ಕೃಷ್ಣ ಮತ್ತು ಅಶೋಕನ ಶಾಸನಗಳು Read More »

Kishori Amonkar -ನಾದತಪಸ್ಸಿನಲ್ಲಿ ಕಿಶೋರಿತಾಯಿ

Photo by Avinash paascricha   “ನನ್ನಪ್ಪ ತೀರಿಕೊಂಡಾಗ ನಾನು ತುಂಬಾ ಸಣ್ಣವಳು. ಆಗ ನಮ್ಮಮ್ಮನ ಬಳಿ ಹಣವಿರಲಿಲ್ಲ, ಬೇರೆಯವರ ಬೆಂಬಲವೂ ಇರಲಿಲ್ಲ. ನಾವು ಮೂವರು ಒಡಹುಟ್ಟಿದವರು. ನಾನೇ ದೊಡ್ಡವಳು, ನನ್ನ ನಂತರ ತಮ್ಮ ಮತ್ತು ತಂಗಿ ಕೊನೆಯವಳು. ಮೂವರನ್ನು ಓದಿಸಿ, ಸಂಗೀತ ಮುಂತಾದ್ದನ್ನು ಕಲಿಸುವ ಹೊಣೆ ಅವರ ಮೇಲೆ ಬಿತ್ತು. ತುಂಬಾ ಕಷ್ಟಪಟ್ಟರು. ಆದರೆ ಕಷ್ಟದ ಅನುಭವ ಒಂದಿಷ್ಟೂ ನಮಗಾಗದಂತೆ ಬೆಳೆಸಿದರು. ನಮ್ಮನ್ನು ಚೆನ್ನಾಗಿ ಓದಿಸಿದರು. ಅಮ್ಮ ಪಟ್ಟ ಕಷ್ಟಗಳನ್ನು ನಾನಿಲ್ಲಿ ವಿವರಿಸುತ್ತಿಲ್ಲ. ಕಾರ್ಯಕ್ರಮ ನೀಡಲು

Kishori Amonkar -ನಾದತಪಸ್ಸಿನಲ್ಲಿ ಕಿಶೋರಿತಾಯಿ Read More »

Krishna T M ಮಾತನಾಡುತ್ತಲೇ ಇರೋಣ ಟಿ ಎಂ ಕೃಷ್ಣ ಅವರೊಂದಿಗೆ ಮಾತುಕತೆ

ವೇಣುಗೋಪಾಲ್ ಟಿ ಎಸ್ ಮತ್ತು ಶೈಲಜಾ ಹೊಸ ತಲೆಮಾರಿನ ಕರ್ನಾಟಕ ಸಂಗೀತ ಕಲಾವಿದರಲ್ಲಿ ತುಸು ಒಡೆದುನಿಲ್ಲುವ ಕಲಾವಿದ ಶ್ರೀ ಟಿ ಎಂ ಕೃಷ್ಣ. ಕರ್ನಾಟಕ ಸಂಗೀತದ ಹೆಚ್ಚಿನ ಕಲಾವಿದರಂತೆ ಸಾಂಪ್ರದಾಯಿಕ ವೈದಿಕ ಕುಟುಂಬದಿಂದ ಬಂದು, ಸಂಗೀತವನ್ನು ತೀರಾ ಸಂಪ್ರದಾಯಿಕ ರೀತಿಯಲ್ಲಿ ಕಲಿತವರು. ತಾಯಿಯಿಂದ ಸಂಗೀತಕ್ಕೆ ಪ್ರವೇಶ ಪಡೆದ ಕೃಷ್ಣ, ಬಿ ಸೀತಾರಾಮ ಶರ್ಮ ಅವರಲ್ಲಿ ಹಲವು ವರ್ಷಗಳು ಕಲಿತು, ಮುಂದೆ ರಾಗ-ತಾನ-ಪಲ್ಲವಿಯ ತರಬೇತಿಯನ್ನು ವಿದ್ವಾನ್ ಚೆಂಗಲ್‌ಪೇಟ್ ರಂಗನಾಥನ್ ಪಡೆದರು. ಅನಂತರ ಅತ್ಯಂತ ಸಂಪ್ರದಾಯವಾದಿಯೂ, ಶ್ರೇಷ್ಠ ವಿದ್ವಾಂಸರೂ ಆದ

Krishna T M ಮಾತನಾಡುತ್ತಲೇ ಇರೋಣ ಟಿ ಎಂ ಕೃಷ್ಣ ಅವರೊಂದಿಗೆ ಮಾತುಕತೆ Read More »

Balasubramanya S P ಹಿನ್ನೆಲೆಗಾಯನಕ್ಕೊಂದು ವ್ಯಾಖ್ಯಾನ ನೀಡಿದ ಎಸ್‌ಪಿಬಿ

ವೇಣುಗೋಪಾಲ್ ಟಿ.ಎಸ್  ಮತ್ತು ಶೈಲಜ ಮದ್ರಾಸಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ೧೭ರ ಹರೆಯದ ಒಬ್ಬ ಯುವಕ ಸಂಗೀತ ಸ್ಪರ್ಧೆಯೊಂದರಲ್ಲಿ ಹಾಡುತ್ತಾನೆ. ಎರಡನೇ ಬಹುಮಾನ ಬರುತ್ತದೆ. ಬಹುಮಾನ ವಿತರಣೆಯ ಸಂದರ್ಭದಲ್ಲಿ ಬಹುಮಾನ ವಿಜೇತರು ಹಾಡಬೇಕು ಅನ್ನೋದು ಅಲ್ಲಿಯ ಪದ್ಧತಿ. ಬಹುಮಾನ ವಿತರಣೆಗೆ ಬಂದ ಎಸ್ ಜಾನಕಿಯವರು ಹಾಡು ಕೇಳಿ ಸಿಟ್ಟಾಗುತ್ತಾರೆ. ಏನ್ರಿ ಇದ? ಈ ಹುಡುಗ ಎಷ್ಟು ಚೆನ್ನಾಗಿ ಹಾಡ್ತಾನೆ. ಇವನಿಗೆ ಎರಡನೇ ಬಹುಮಾನ ಕೊಟ್ಟಿದ್ದೀರಿ. ಮೊದಲ ಬಹುಮಾನ ಕೊಡಬೇಕಿತ್ತು ಅಂತ ಸಂಘಟಕರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹುಡುಗನನ್ನು ಕರೆದು

Balasubramanya S P ಹಿನ್ನೆಲೆಗಾಯನಕ್ಕೊಂದು ವ್ಯಾಖ್ಯಾನ ನೀಡಿದ ಎಸ್‌ಪಿಬಿ Read More »

Rajeev Taranath ಸರೋದ್ ಸರೋವರದ ನಡುವೆ ಸೌಗಂಧಿಕಾ ಪುಷ್ಪ

ಶೈಲಜಾ ಮತ್ತು ವೇಣುಗೋಪಾಲ್ ಅಸಾಧ್ಯ ಪ್ರತಿಭಾವಂತರೂ, ಲೋಕವಿಖ್ಯಾತರೂ ಆಗಿರುವವರ ಮಗನಾಗಿ ಹುಟ್ಟಿ ಬಾಳುವುದು ಸುಲಭವಲ್ಲ. ತಂದೆ ಲೋಕವಿಖ್ಯಾತ ಪಂಡಿತ ತಾರಾನಾಥರು. ಒಂದು ಇಡೀ ತಲೆಮಾರನ್ನು ತಮ್ಮ ಅಗಾಧ ಪ್ರತಿಭೆಯಿಂದ ಬೆರಗುಗೊಳಿಸಿದವರು. ತಾಯಿ ಸುಮತೀಬಾಯಿ ೧೯೨೫ರಷ್ಟು ಹಿಂದೆಯೇ ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸಿ, ಪಂಡಿತ್ ನೆಹರೂ ಅಂತಹವರ ಮೆಚ್ಚುಗೆ ಗಳಿಸಿದವರು. ಇಂತಹವರ ಮಗನಾಗಿ ಸಾಧ್ಯವಿರುವುದು ಎರಡೇ ಆಯ್ಕೆ. ಅವರ ಅಗಾಧ ಪ್ರಭೆಯಲ್ಲಿ, ಅದರ ನೆರಳಿನಲ್ಲಿ, ಅವರ ಅಸ್ಮಿತೆಯಲ್ಲಿ ಕರಗಿಹೋಗುವುದು. ಇಲ್ಲವೇ ಅವರನ್ನು ಪ್ರೀತಿಸುತ್ತಾ, ಅನುಕರಿಸುತ್ತಾ, ಪ್ರಶ್ನಿಸುತ್ತಾ, ಹೋರಾಡುತ್ತಾ, ನಿರಾಕರಿಸುತ್ತಾ, ಮೆಚ್ಚುತ್ತಾ,

Rajeev Taranath ಸರೋದ್ ಸರೋವರದ ನಡುವೆ ಸೌಗಂಧಿಕಾ ಪುಷ್ಪ Read More »

ನಾವು ಗೆದ್ದೇ ಗೆಲ್ಲುತ್ತೇವೆ ಅಂತ ಅವಳಿಗೆ ಭರವಸೆ ಕೊಡಬೇಕಾಗಿದೆ

ವಿನೇಶ್ ಪೋಗಟ್ [ಬ್ರಿಜುಭೂಷಣ್ ದೌರ್ಜನ್ಯದ ವಿರುದ್ಧ ಹಲವು ಕುಸ್ತಿಪಟುಗಳು ಪ್ರತಿಭಟನೆ ಮಾಡಿದ್ದರು. ಅವರ ಹೋರಾಟ ಈ ಸಮಯದಲ್ಲಿ ತುಂಬಾ ಕಾಡುತ್ತೆ. ಆ ಸಮಯದಲ್ಲಿ ವಿನೇಶ್ ಪೋಗಟ್ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಒಂದು ಲೇಖನ ಬರೆದಿದ್ದರು. ಅದನ್ನು ಸುಮ್ಮನೆ ಅನುವಾದಿಸಿ ಹಂಚಿಕೊಳ್ಳುತ್ತಿದ್ದೇನೆ.] ನ್ಯಾಯಕ್ಕಾಗಿ ನಮ್ಮ ಹೋರಾಟ ಪ್ರಾರಂಭವಾಗಿ ಒಂದು ತಿಂಗಳಷ್ಟೇ ಆಗಿದೆ. ಆದರೆ ಒಂದು ವರ್ಷದಿಂದ ಜಂತರ್ ಮಂತರನಲ್ಲಿದ್ದೇವೆ ಅನಿಸುತ್ತಿದೆ. ಬಿಸಿಲಿನಲ್ಲಿ ಫುಟ್‌ಪಾತಿನಲ್ಲಿ ಮಲಗುತ್ತಿದ್ದೇವೆ, ಸೊಳ್ಳೆಗಳು ಕಚ್ಚುತ್ತಿವೆ, ಸಂಜೆಯಾದ ಮೇಲೆ ಬೀದಿನಾಯಿಗಳು ಜೊತೆಗೆ ಬರುತ್ತವೆ ಅಥವಾ ಒಳ್ಳೆಯ ಟಾಯಲೆಟ್

ನಾವು ಗೆದ್ದೇ ಗೆಲ್ಲುತ್ತೇವೆ ಅಂತ ಅವಳಿಗೆ ಭರವಸೆ ಕೊಡಬೇಕಾಗಿದೆ Read More »