Niyatha

ದಾರಿ ಯಾವುದಯ್ಯ ಟ್ರಂಪ್‌ ಸುಂಕಕ್ಕೆ?

ಶ್ವೇತಭವನದ ವಾಣಿಜ್ಯ ಸಲಹೆಗಾರ ಪೀಟರ್ ನವಾರೋ ದೃಷ್ಟಿಯಲ್ಲಿ ಉಕ್ರೇನ್ ಸಂಘರ್ಷ ‘ಮೋದಿಯವರ ಯುದ್ಧ’. ಅವರ ಪ್ರಕಾರ ಜಗತ್ತಿನಲ್ಲೇ ಅತಿಹೆಚ್ಚು ಸುಂಕ ಹಾಕುವ ದೇಶ ಭಾರತ–ಸುಂಕದ ಮಹಾರಾಜ. ಅಮೆರಿಕದ ಸರಕುಗಳ ಮೇಲೆ ಸುಂಕ ಹೇರಿ, ಅವು ಭಾರತಕ್ಕೆ ಬಾರದಂತೆ ತಡೆಯುತ್ತಿದೆ. ಇದರಿಂದ ಅಮೆರಿಕದ ಬಳಕೆದಾರರು, ವಾಣಿಜ್ಯೋದ್ಯಮಿಗಳು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಅಮೆರಿಕದ ತೆರಿಗೆದಾರರು ಮೋದಿಯವರ ಯುದ್ಧಕ್ಕೆ ಹಣ ತೆರುತ್ತಿದ್ದಾರೆ. ಆದರೆ, ಭಾರತ ಅಮೆರಿಕದಲ್ಲಿ ತನ್ನ ಸರಕುಗಳನ್ನು ಮಾರಿಕೊಂಡು ಡಾಲರ್ ಸಂಪಾದಿಸಿಕೊಳ್ಳುತ್ತಿದೆ. ಆ ದುಡ್ಡಿನಿಂದ ರಷ್ಯಾದಿಂದ ರಿಯಾಯಿತಿ […]

ದಾರಿ ಯಾವುದಯ್ಯ ಟ್ರಂಪ್‌ ಸುಂಕಕ್ಕೆ? Read More »

Amarthya sen-ಜನಪರ ಕಾಳಜಿಯ ತೀಕ್ಷ್ಣ ತಾರ್ಕಿಕ ಮನಸ್ಸಿನ ಅರ್ಥಶಾಸ್ತ್ರಜ್ಞ- ಅಮರ್ತ್ಯ ಸೇನ್

  ಟಿ ಎಸ್ ವೇಣುಗೋಪಾಲ್   “ಒಂದು ಮದ್ಯಾಹ್ನ, ಒಬ್ಬ ಯುವಕ ಜೋರಾಗಿ ಕಿರುಚಿಕೊಂಡು ನಮ್ಮ ಮನೆಯ ಮುಂದೆ ಓಡಿಕೊಂಡು ಬಂದ. ಮೈಯೆಲ್ಲಾ ರಕ್ತಮಯವಾಗಿತ್ತು. ಯಾರೋ ಅವನನ್ನು ಚಾಕುವಿನಿಂದ ಇರಿದಿದ್ದರು. ಆತ ಖಾದಿರ್ ಮಿಯಾ ಅಂತ ಒಬ್ಬ ಮುಸ್ಲಿಂ ಕೆಲಸಗಾರ. ಕೆಲಸ ಹುಡುಕಿಕೊಂಡ ಇಲ್ಲಿಗೆ ಬಂದಿದ್ದ. ದಾರಿಯಲ್ಲಿ ಯಾರೋ ಮತಾಂಧರು ಅವನನ್ನು ಇರಿದಿದ್ದರು. ನಮ್ಮ ತಂದೆ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ’ಆಗದವರೂ ಇರುವ ಕಡೆ, ಅದೂ ಕೋಮು ಗಲಭೆಯ ಸಮಯದಲ್ಲಿ ಹೋಗಬೇಡ’ ಅಂತ ಅವನ ಹೆಂಡತಿ

Amarthya sen-ಜನಪರ ಕಾಳಜಿಯ ತೀಕ್ಷ್ಣ ತಾರ್ಕಿಕ ಮನಸ್ಸಿನ ಅರ್ಥಶಾಸ್ತ್ರಜ್ಞ- ಅಮರ್ತ್ಯ ಸೇನ್ Read More »

ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ

  ಆಫ್ರಿಕಾ ಸುದ್ದಿಯಲ್ಲಿದೆ. ಟೋಗೊದಲ್ಲಿ ಯುವಜನ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಬುರ್ಕಿನಾ ಫಾಸೊ, ಮಾಲಿ, ನೈಜೆರ್‌ನಲ್ಲಿ ಮಿಲಿಟರಿ ದಂಗೆಗಳಾಗಿವೆ. ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ದಂಗೆಗಳು ನಡೆಯುತ್ತಿರುವ ಬಹುತೇಕ ದೇಶಗಳು ಹಿಂದೆ ಫ್ರಾನ್ಸ್‌ನ ವಸಾಹತುಗಳಾಗಿದ್ದವು. ಈ ದೇಶಗಳಲ್ಲಿನ ಸಂಪನ್ಮೂಲವನ್ನು ಫ್ರಾನ್ಸ್ ಹಲವು ದಶಕಗಳಿಂದ ನಿರಂತರವಾಗಿ ಲೂಟಿ ಹೊಡೆದು, ಅತ್ಯಂತ ಕ್ರೂರವಾಗಿ ಆಡಳಿತ ನಡೆಸಿದೆ. ಆಫ್ರಿಕಾದವರು ತೀವ್ರವಾದ ಹೋರಾಟ ನಡೆಸಿದ್ದರಿಂದ 1950ರ ಸುಮಾರಿನಲ್ಲಿ ಈ ದೇಶಗಳು ಸ್ವತಂತ್ರವಾದವು. ಆದರೆ, ಬಹುತೇಕ ದೇಶಗಳಿಗೆ ಬರೀ ಹೆಸರಿಗಷ್ಟೇ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ

ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ Read More »

T S Satyavathi, ರಾಗ ಅನ್ನೋದು ಅಕ್ಷರವೆಂಬ ಅಚ್ಚಿನಲ್ಲಿ ಸುರಿದ ಪಾಕ. ಡಾ ಟಿ ಎಸ್ ಸತ್ಯವತಿಯವರೊಂದಿಗಿನ ಸಂದರ್ಶನ

ಸಂದರ್ಶಕರು – ಶೈಲಜ   ಡಾ ಟಿ ಎಸ್ ಸತ್ಯವತಿಯವರು ಹೆಸರಾಂತ ಕರ್ನಾಟಕ ಸಂಗೀತ ಗಾಯಕಿ, ಸಂಗೀತಶಾಸ್ತ್ರಜ್ಞೆ ಹಾಗೂ ಸಂಸ್ಕೃತ ವಿದುಷಿ. ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು. ಎರಡರ ಹರೆಯದಲ್ಲಿಯೇ ಮೈಸೂರು ಮಹಾರಾಣಿಯ ಮುಂದೆ ಹಾಡಿದ ಬಾಲಪ್ರತಿಭೆ. ಸಂಗೀತದಲ್ಲಿ ಅಭಿರುಚಿ ಹಾಗೂ ಪರಿಶ್ರಮವಿದ್ದ ತಾಯಿಯ ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಅವರ ಸಂಗೀತ ಪ್ರತಿಭೆ ಅರಳಿತು. ಹಿರಿಯಕ್ಕ ವಿದುಷಿ ವಸಂತ ಮಾಧವಿ, ವಿದ್ವಾನ್ ಆರ್ ಕೆ ಶ್ರೀಕಂಠನ್ ಅವರ ಮಾರ್ಗದರ್ಶನದಲ್ಲಿ ಅವರ ಕಲೆ ಅರಳಿ, ಪಕ್ವಗೊಂಡಿತು. ವಿದ್ವಾನ್ ಬೆಂಗಳೂರು ಕೆ ವೆಂಕಟರಾಂ

T S Satyavathi, ರಾಗ ಅನ್ನೋದು ಅಕ್ಷರವೆಂಬ ಅಚ್ಚಿನಲ್ಲಿ ಸುರಿದ ಪಾಕ. ಡಾ ಟಿ ಎಸ್ ಸತ್ಯವತಿಯವರೊಂದಿಗಿನ ಸಂದರ್ಶನ Read More »

ಯಾವ ಹಾಡಿಗೆ ಯಾವ ರಾಗ? ನಾಡಗೀತೆ ವಿವಾದದ ಸುತ್ತಮುತ್ತ

ಶೈಲಜಾ ಕರ್ನಾಟಕದ ನಾಡಗೀತೆ ವಿವಾದ ಇಂದು ಹೈಕೋರ್ಟ್ ಮೆಟ್ಟಲೇರಿರುವುದು ಸಾಕಷ್ಟು ದೊಡ್ಡ ಸುದ್ದಿ. ಗೀತೆಯೊಂದನ್ನು ಹೀಗೇ ಹಾಡಬೇಕು ಎಂದು ಸರ್ಕಾರ ನಿರ್ದೇಶಿಸುವುದು ಸಂಗೀತ ಕಲಾವಿದರ ಸ್ವಾತಂತ್ರ್ಯವನ್ನು ಅಪಹರಿಸುತ್ತದೆ. ಏಕೆಂದರೆ ತಮ್ಮ ಮನಸ್ಸಿಗೆ ಇಷ್ಟ ಬಂದಂತೆ ಕಲೆಯನ್ನು ನಿರೂಪಿಸುವ ಕಲಾವಿದನ ಸ್ವಾತಂತ್ರ್ಯವನ್ನು ಇದು ಉಲ್ಲಂಘಿಸುತ್ತದೆ. ಈ ವಾದ ಹಲವು ಗಂಭೀರ ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತದೆ. ಉದಾಹರಣೆಗೆ, ಕಲಾವಿದ, ರಚನಕಾರ, ವಾಗ್ಗೇಯಕಾರ, ಸಂಗೀತ ಸಂಯೋಜಕ ಮತ್ತು ಸಂಗೀತದ ನಡುವಿನ ಪರಸ್ಪರ ಸಂಬಂಧ; ಹಾಗೆಯೇ ಪ್ರಜೆಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ನಾಡಿನ

ಯಾವ ಹಾಡಿಗೆ ಯಾವ ರಾಗ? ನಾಡಗೀತೆ ವಿವಾದದ ಸುತ್ತಮುತ್ತ Read More »

ಭಾರತದಲ್ಲಿ ಸತ್ಯ ಜನಗಳ ನಡುವೆ ದೊರಕುತ್ತದೆ ಗಾಯಕ ಟಿ ಎಂ ಕೃಷ್ಣ ಮತ್ತು ಅಶೋಕನ ಶಾಸನಗಳು

ಭಾರತದಲ್ಲಿ ಸತ್ಯ ಜನಗಳ ನಡುವೆ ದೊರಕುತ್ತದೆ ಗಾಯಕ ಟಿ ಎಂ ಕೃಷ್ಣ ಮತ್ತು ಅಶೋಕನ ಶಾಸನಗಳು ಶೈಲಜ   ೨೦೨೧ರಲ್ಲಿ ಗಾಯಕ ಟಿ.ಎಂ ಕೃಷ್ಣ ಅಶೋಕ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಅಶೋಕನ ಶಿಲಾಶಾಸನಗಳನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿ ಹಾಡುವ ಯೋಜನೆಯೊಂದನ್ನು ಹಾಕಿಕೊಂಡರು. ಬಹುಶಃ ಅಂತಹ ಪ್ರಯತ್ನವೊಂದನ್ನು ಈ ತನಕ ಯಾರೂ ಮಾಡಿದಂತಿಲ್ಲ. ಅವು ಸುಮಾರು ೨೨೦೦ ವರ್ಷಗಳಷ್ಟು ಪುರಾತನವಾದ (ಕ್ರಿ.ಪೂ. ೨೬೮-೨೩೨) ಶಿಲಾಶಾಸನಗಳು. ಅವುಗಳಲ್ಲಿ ಇವರಿಗೇಕೆ ಅಷ್ಟೊಂದು ಆಸಕ್ತಿ ಮೂಡಿತು? ಅವನ್ನು ಹಾಡೋದಕ್ಕೆ ಇವರಿಗೇಕೆ ಅಷ್ಟೊಂದು ಉತ್ಸಾಹ? ಇಂದಿಗೆ

ಭಾರತದಲ್ಲಿ ಸತ್ಯ ಜನಗಳ ನಡುವೆ ದೊರಕುತ್ತದೆ ಗಾಯಕ ಟಿ ಎಂ ಕೃಷ್ಣ ಮತ್ತು ಅಶೋಕನ ಶಾಸನಗಳು Read More »

Krishna T M ಮಾತನಾಡುತ್ತಲೇ ಇರೋಣ ಟಿ ಎಂ ಕೃಷ್ಣ ಅವರೊಂದಿಗೆ ಮಾತುಕತೆ

ವೇಣುಗೋಪಾಲ್ ಟಿ ಎಸ್ ಮತ್ತು ಶೈಲಜಾ ಹೊಸ ತಲೆಮಾರಿನ ಕರ್ನಾಟಕ ಸಂಗೀತ ಕಲಾವಿದರಲ್ಲಿ ತುಸು ಒಡೆದುನಿಲ್ಲುವ ಕಲಾವಿದ ಶ್ರೀ ಟಿ ಎಂ ಕೃಷ್ಣ. ಕರ್ನಾಟಕ ಸಂಗೀತದ ಹೆಚ್ಚಿನ ಕಲಾವಿದರಂತೆ ಸಾಂಪ್ರದಾಯಿಕ ವೈದಿಕ ಕುಟುಂಬದಿಂದ ಬಂದು, ಸಂಗೀತವನ್ನು ತೀರಾ ಸಂಪ್ರದಾಯಿಕ ರೀತಿಯಲ್ಲಿ ಕಲಿತವರು. ತಾಯಿಯಿಂದ ಸಂಗೀತಕ್ಕೆ ಪ್ರವೇಶ ಪಡೆದ ಕೃಷ್ಣ, ಬಿ ಸೀತಾರಾಮ ಶರ್ಮ ಅವರಲ್ಲಿ ಹಲವು ವರ್ಷಗಳು ಕಲಿತು, ಮುಂದೆ ರಾಗ-ತಾನ-ಪಲ್ಲವಿಯ ತರಬೇತಿಯನ್ನು ವಿದ್ವಾನ್ ಚೆಂಗಲ್‌ಪೇಟ್ ರಂಗನಾಥನ್ ಪಡೆದರು. ಅನಂತರ ಅತ್ಯಂತ ಸಂಪ್ರದಾಯವಾದಿಯೂ, ಶ್ರೇಷ್ಠ ವಿದ್ವಾಂಸರೂ ಆದ

Krishna T M ಮಾತನಾಡುತ್ತಲೇ ಇರೋಣ ಟಿ ಎಂ ಕೃಷ್ಣ ಅವರೊಂದಿಗೆ ಮಾತುಕತೆ Read More »

Rajeev Taranath ಸರೋದ್ ಸರೋವರದ ನಡುವೆ ಸೌಗಂಧಿಕಾ ಪುಷ್ಪ

ಶೈಲಜಾ ಮತ್ತು ವೇಣುಗೋಪಾಲ್ ಅಸಾಧ್ಯ ಪ್ರತಿಭಾವಂತರೂ, ಲೋಕವಿಖ್ಯಾತರೂ ಆಗಿರುವವರ ಮಗನಾಗಿ ಹುಟ್ಟಿ ಬಾಳುವುದು ಸುಲಭವಲ್ಲ. ತಂದೆ ಲೋಕವಿಖ್ಯಾತ ಪಂಡಿತ ತಾರಾನಾಥರು. ಒಂದು ಇಡೀ ತಲೆಮಾರನ್ನು ತಮ್ಮ ಅಗಾಧ ಪ್ರತಿಭೆಯಿಂದ ಬೆರಗುಗೊಳಿಸಿದವರು. ತಾಯಿ ಸುಮತೀಬಾಯಿ ೧೯೨೫ರಷ್ಟು ಹಿಂದೆಯೇ ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸಿ, ಪಂಡಿತ್ ನೆಹರೂ ಅಂತಹವರ ಮೆಚ್ಚುಗೆ ಗಳಿಸಿದವರು. ಇಂತಹವರ ಮಗನಾಗಿ ಸಾಧ್ಯವಿರುವುದು ಎರಡೇ ಆಯ್ಕೆ. ಅವರ ಅಗಾಧ ಪ್ರಭೆಯಲ್ಲಿ, ಅದರ ನೆರಳಿನಲ್ಲಿ, ಅವರ ಅಸ್ಮಿತೆಯಲ್ಲಿ ಕರಗಿಹೋಗುವುದು. ಇಲ್ಲವೇ ಅವರನ್ನು ಪ್ರೀತಿಸುತ್ತಾ, ಅನುಕರಿಸುತ್ತಾ, ಪ್ರಶ್ನಿಸುತ್ತಾ, ಹೋರಾಡುತ್ತಾ, ನಿರಾಕರಿಸುತ್ತಾ, ಮೆಚ್ಚುತ್ತಾ,

Rajeev Taranath ಸರೋದ್ ಸರೋವರದ ನಡುವೆ ಸೌಗಂಧಿಕಾ ಪುಷ್ಪ Read More »

Bhimasena Joshi- ಸಂಗೀತವನ್ನರಸಿ ಹೊರಟ ಭೀಮಸೇನ

ಸಂಗೀತವನ್ನರಸಿ ಹೊರಟ ಭೀಮಸೇನ ಶೈಲಜ ಮತ್ತು ವೇಣುಗೋಪಾಲ್ ಸಾಮಾನ್ಯವಾಗಿ ’ಪ್ರಯಾಣ’ ಎನ್ನುವುದು ಹುಡುಕಾಟಕ್ಕೆ, ಆತ್ಮಸಾಕ್ಷಾತ್ಕಾರಕ್ಕೆ ಬಳಸುವ ಒಂದು ಪ್ರತಿಮೆ. ಭೀಮಸೇನರಲ್ಲಿ ಪ್ರಯಾಣ ಎನ್ನುವುದು ಅಕ್ಷರಶಃ ಸಂಗೀತದ ಸಾಕ್ಷಾತ್ಕಾರವೇ ಆಗಿದೆ. ಇವರು ಹುಟ್ಟಿದ್ದು ೧೯೨೨ರ ಫೆಬ್ರುವರಿಯಲ್ಲಿ. ಅವರದ್ದು ಸಂಗೀತದ ಮನೆತನವಲ್ಲ. ಅಧ್ಯಯನಶೀಲತೆ ಮತ್ತು ವಿದ್ವತ್ತಿಗೆ ಹೆಸರಾದ ಮನೆ. ತಂದೆ ಗುರುರಾಜ ಜೋಶಿ ಬಹುಭಾಷಾ ಪಂಡಿತರು ಮತ್ತು ಶಿಕ್ಷಣತಜ್ಞರು. ಚಿಕ್ಕಪ್ಪ ಗೋವಿಂದಾಚಾರ್ಯರು ಪ್ರಖ್ಯಾತ ಮನೋಹರ ಗ್ರಂಥಮಾಲೆಯ ಸಂಸ್ಥಾಪಕರು. ಎಳೆಯ ಕಿವಿಗಳಿಗೆ ಸ್ವರಗಳು ಬಿದ್ದದ್ದು ಅಮ್ಮ ಹಾಡುತ್ತಿದ್ದ ದೇವರನಾಮಗಳಿಂದ. ಮನೆಯ ಬಳಿಯ

Bhimasena Joshi- ಸಂಗೀತವನ್ನರಸಿ ಹೊರಟ ಭೀಮಸೇನ Read More »

ಯುರೋಪ್ ಇಂದು ಸಂಕಷ್ಟದಲ್ಲಿದೆ.

  ಟಿ ಎಸ್ ವೇಣುಗೋಪಾಲ್ ಯುರೋಪ್ ಇಂದು ಸಂಕಷ್ಟದಲ್ಲಿದೆ. ಈ ಪ್ರಯುಕ್ತ ಬ್ರಿಟನ್ನಿನ ಲಿಜ್‌ ಟ್ರಸ್‌ ನೇತೃತ್ವದ ಸರ್ಕಾರವು ಮಿನಿ ಬಜೆಟ್ ಪ್ರಕಟಿಸಿದೆ. ವಿವಾದಕ್ಕೂ ಕಾರಣವಾಗಿದೆ. ಶ್ರೀಮಂತರ ಮೇಲಿನ ತೆರಿಗೆಯಲ್ಲಿ ಕಡಿತ ಮಾಡಲಾಗಿದೆ. ತೆರಿಗೆ ಕಡಿಮೆ ಮಾಡುವುದರಿಂದ ಶ್ರೀಮಂತರು ಹೂಡಿಕೆ ಹೆಚ್ಚಿಸುತ್ತಾರೆ, ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎನ್ನುವುದು ಅದರ ಹಿಂದಿನ ತರ್ಕ. ಆದರೆ ತೆರಿಗೆ ಕಡಿತದಿಂದ ಆರ್ಥಿಕ ಪ್ರಗತಿ ಸಾಧಿಸಬಹುದೆಂಬ ಕಲ್ಪನೆಯೇ ಒಂದು ಮಿಥ್ಯೆ ಎಂಬುದನ್ನು ಪಾಲ್ ಕ್ರುಗ್ಮನ್ ಅಂತಹ ಅರ್ಥಶಾಸ್ತ್ರಜ್ಞರು ತೋರಿಸಿದ್ದಾರೆ. ಬ್ರಿಟನ್ನಿನ ಈ ಕ್ರಮಕ್ಕೆ

ಯುರೋಪ್ ಇಂದು ಸಂಕಷ್ಟದಲ್ಲಿದೆ. Read More »