Niyatha

ದೋಸೆ ಅರ್ಥಶಾಸ್ತ್ರ ಮತ್ತು ಹಣದುಬ್ಬರ

ಟಿ ಎಸ್ ವೇಣುಗೋಪಾಲ್   ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ಆರ್‌ಬಿಐ ಗವರ್ನರ್ ಆಗಿದ್ದ ಎಂ.ನರಸಿಂಹಂ ಅವರ ಮನೆಗೆ ಹೋಗಿದ್ದರಂತೆ. ಸ್ವತಃ ಆರ್ಥಿಕ ತಜ್ಞರಾಗಿದ್ದ ನರಸಿಂಹಂ, ಸಿಂಗ್ ಅವರನ್ನು ಉದ್ದೇಶಿಸಿ ‘ನೀವು ಹಣದುಬ್ಬರ ಕಡಿಮೆಯಾಗಿದೆ ಅನ್ನುತ್ತೀರಿ. ಆದರೆ ನಾನು ತರಕಾರಿ ಕೊಳ್ಳುವಾಗ ಮೊದಲಿಗಿಂತ ಹೆಚ್ಚು ಹಣ ಕೊಡುತ್ತಿದ್ದೇನೆ’ ಎಂದು ಕೇಳಿದರಂತೆ. ಅದಕ್ಕೆ ಸಿಂಗ್, ‘ಹೌದು, ನನ್ನ ಹೆಂಡತಿಯೂ ಇದೇ ಪ್ರಶ್ನೆ ಕೇಳುತ್ತಾಳೆ. ನನಗೆ ವಿವರಿಸೋದಕ್ಕೆ ಕಷ್ಟವಾಗುತ್ತೆ ಅಂತ ಅವಳಿಗೆ ಹೇಳಿದೆ’ ಅಂದರಂತೆ. ಇಬ್ಬರೂ ತಜ್ಞರು. ಅವರೇ […]

ದೋಸೆ ಅರ್ಥಶಾಸ್ತ್ರ ಮತ್ತು ಹಣದುಬ್ಬರ Read More »

ದೇಶದ ಆರ್ಥಿಕತೆಗೆ ಬುನಾದಿ ಹಾಕಿಕೊಟ್ಟ ಆರ್ಥಿಕ ಪ್ರಯೋಗ

ಟಿ ಎಸ್ ವೇಣುಗೋಪಾಲ್ ಇತ್ತೀಚಿನ ದಿನಗಳಲ್ಲಿ ಭಾರತ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ನೆಹರೂವನ್ನೇ ಕಾರಣ ಮಾಡೋದು ಕೆಲವರಿಗೆ ಗೀಳಾಗಿದೆ. ದೇಶದ ವಿಭಜನೆ, ಚೀನಾ, ಪಾಕಿಸ್ತಾನ, ಕೃಷಿ, ಬಡತನ, ಶಿಕ್ಷಣ ಯಾವುದೇ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಯಿರಲಿ ಅದಕ್ಕೆ ನೆಹರೂವನ್ನು ಹೊಣೆ ಮಾಡುವುದು ಸಾಮಾನ್ಯವಾಗಿದೆ. ಅವರು ಸತ್ತು ೬೦ ವರ್ಷವಾದರೂ ಸಂತೋಷವಾಗಿ ಬಯ್ಯುತ್ತಿರುತ್ತೇವೆ. ಇಂದಿನ ಆರ್ಥಿಕ ಬಿಕ್ಕಟ್ಟಿಗೂ ನೆಹರೂ ಆಗ ಅನುಸರಿಸಿದ ಮಾದರಿಯೇ ಕಾರಣ ಅನ್ನುವುದನ್ನು ಕೇಳಿದ್ದೇವೆ.   ಭಾರತ ಅನುಸರಿಸಿದ ಆರ್ಥಿಕ ಮಾದರಿಯನ್ನು ಸಾಮಾನ್ಯವಾಗಿ ನೆಹರೂ-ಮಹಾಲನೋಬಿಸ್ ಮಾದರಿ ಅಂತ

ದೇಶದ ಆರ್ಥಿಕತೆಗೆ ಬುನಾದಿ ಹಾಕಿಕೊಟ್ಟ ಆರ್ಥಿಕ ಪ್ರಯೋಗ Read More »

25ರ ನೋಬೆಲ್

[ಈ ವರ್ಷದ ಅರ್ಥಶಾಸ್ತ್ರದ ನೋಬೆಲ್ ಡೆರನ್ ಅಸಿಮೊಗ್ಲು, ಜೇಮ್ಸ್ ಎ ರಾಬಿನ್ಸನ್, ಹಾಗೂ ಸಿಮನ್ ಜಾನ್ಸನ್ ಅವರಿಗೆ ಲಭಿಸಿದೆ. ಡೆರನ್ ಅಸಿಮೊಗ್ಲು ಇಸ್ತಾಂಬುಲ್‌ನಲ್ಲಿ ಜನಿಸಿದರು. ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದರು. ನಂತರ ಈಗ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಜೇಮ್ಸ್ ಎ ರಾಬಿನ್ಸನ್ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡಿದರು. ಸದ್ಯ ಷಿಕ್ಯಾಗೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿಮನ್ ಜಾನ್ಸನ್ ಎಂಐಟಿಯಲ್ಲಿ ಪಿಎಚ್‌ಡಿ ಮಾಡಿ, ಅಲ್ಲೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.] ಯಾಕೆ ಕೆಲ ದೇಶಗಳು

25ರ ನೋಬೆಲ್ Read More »

ಕ್ಷೇತ್ರ ಮರುವಿಂಗಡಣೆಯ ಚರ್ಚೆ: ಜನ ನಿಭಿಡ ಉತ್ತರ ವರ್ಸಸ್ ಜನ ಕಡಿಮೆ ಇರುವ ದಕ್ಷಿಣಕ್ಕೆ ಪರ್ಯಾಯಗಳಿವೆ

ಮೂಲ: ಅಂಜಿಶ್ನು ದಾಸ್ ಇಂಡಿಯನ್ ಎಕ್ಸ್‌ಪ್ರೆಸ್, ಮಾರ್ಚಿ ೧೮, ೨೦೨೫   ಈಗ ಕ್ಷೇತ್ರ ಮರುವಿಂಗಡನೆ ಕುರಿತ ಚರ್ಚೆ ತೀವ್ರವಾಗುತ್ತಿದೆ. ೨೦೨೬ರೊಳಗೆ ಅದು ನಿರ್ಧಾರವಾಗಬೇಕು. ಲೋಕಸಭೆಯಲ್ಲಿ ಸ್ಥಾನಗಳನ್ನು ನಿಗದಿಪಡಿಸಲು ಕೇವಲ ಜನಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಳ್ಳಬಾರದು ಎಂದು ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಒಪ್ಪಿಕೊಂಡಿವೆ. ಯಾಕೆಂದರೆ ಇದರಿಂದ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಿರುವ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಇದಕ್ಕೆ ಹಲವು ಪರ್ಯಾಯ ಕ್ರಮಗಳನ್ನು ಹಲವು ವರ್ಷಗಳಿಂದ ಸೂಚಿಸುತ್ತಾ ಬರಲಾಗಿದೆ. ಫಲವತ್ತತೆಯ ದರವನ್ನು ಕ್ಷೇತ್ರಗಳ ಸಂಖ್ಯೆಯನ್ನು ನಿರ್ಧರಿಸುವುದಕ್ಕೆ ಪರಿಗಣಿಸಬೇಕು ಅನ್ನುವುದರಿಂದ ಮೊದಲುಗೊಂಡು ರಾಜ್ಯಸಭಾದ

ಕ್ಷೇತ್ರ ಮರುವಿಂಗಡಣೆಯ ಚರ್ಚೆ: ಜನ ನಿಭಿಡ ಉತ್ತರ ವರ್ಸಸ್ ಜನ ಕಡಿಮೆ ಇರುವ ದಕ್ಷಿಣಕ್ಕೆ ಪರ್ಯಾಯಗಳಿವೆ Read More »

ಹಣದುಬ್ಬರ ಏನು, ಯಾಕೆ, ಹೇಗೆ?

ಟಿ ಎಸ್ ವೇಣುಗೋಪಾಲ್ ಹಣದುಬ್ಬರ ಮತ್ತೆ ಮತ್ತೆ ಚರ್ಚೆಯಾಗುತ್ತಿರುವ ವಿಷಯ. ಸಾಮಾನ್ಯವಾಗಿ ಬೆಲೆಗಳ ಹೆಚ್ಚಳವನ್ನು ಹಣದುಬ್ಬರ ಅಂತ ಕರೆಯಲಾಗುತ್ತದೆ. ಆದರೆ ಯಾವುದೋ ಕೆಲವು ಸರಕು ಹಾಗೂ ಸೇವೆಗಳ ಬೆಲೆ ಹೆಚ್ಚಿದಾಗ ಅದು ಹಣದುಬ್ಬರ ಅನಿಸಿಕೊಳ್ಳುವುದಿಲ್ಲ. ಒಟ್ಟಾರೆ ವಿಭಿನ್ನ ಕ್ಷೇತ್ರಗಳ ಸರಕು ಹಾಗೂ ಸೇವೆಗಳ ಬೆಲೆಗಳ ಹೆಚ್ಚಳವನ್ನು ಹಣದುಬ್ಬರ ಅಂತ ಕರೆಯುವುದು ವಾಡಿಕೆ. ಹಣದುಬ್ಬರದ ಹೊಡೆತ ಮೊದಲಿಗೆ ಬೀಳುವುದು ಜನಸಾಮಾನ್ಯರ ಮೇಲೆ. ಅದರಲ್ಲೂ ಬೆಲೆ ಹೆಚ್ಚಿದ ಪ್ರಮಾಣದಲ್ಲಿ ಅವರ ಆದಾಯ ಹೆಚ್ಚದೇ ಹೋದರೆ ಅವರ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ.

ಹಣದುಬ್ಬರ ಏನು, ಯಾಕೆ, ಹೇಗೆ? Read More »

ಕೆಂದ್ರದಿಂದ ರಾಜ್ಯಗಳಿಗೆ ನ್ಯಾಯವಾಗಿ ಸಿಗಬೇಕಾದ್ದು ಸಿಗುತ್ತಿದೆಯೇ?

ಆರ್.  ರಾಂಕುಮಾರ್ ಅನುವಾದ: ಟಿ ಎಸ್ ವೇಣುಗೋಪಾಲ್ ಇತ್ತೀಚೆಗೆ ಕೇರಳ ಹಾಗೂ ಕರ್ನಾಟಕದ ಸರ್ಕಾರಗಳು ಚಳುವಳಿ ನಡೆಸಿದವು. ಹಲವು ರಾಜ್ಯ ಸರ್ಕಾರಗಳು ಅದಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದವು. ಈ ಚಳುವಳಿ ಭಾರತದಲ್ಲಿನ ವಿತ್ತೀಯ ಒಕ್ಕೂಟ ವ್ಯವಸ್ಥೆಯಲ್ಲಿನ ಹಲವು ಸಮಸ್ಯಾತ್ಮಕ ಅಂಶಗಳನ್ನು ಮುನ್ನೆಲೆಗೆ ತಂದಿದೆ. ಹಣಕಾಸಿನ ವಿತರಣೆಗೆ ಸಂಬಂಧಿಸಿದಂತೆ ರಾಜ್ಯಗಳ ನಡುವೆ ಅಸಮಾನ ವಿತರಣೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿವೆ. ಹಾಗೆಯೇ ಕೇಂದ್ರದಿಂದ ರಾಜ್ಯಗಳಿಗೆ ಆಗುತ್ತಿರುವ ಹಂಚಿಕೆಯ ಬಗ್ಗೆಯೂ ಪ್ರಶ್ನೆಗಳಿವೆ. ಹೊಸದಾಗಿ ರಚನೆಯಾಗಿರುವ ೧೬ನೇ ಹಣಕಾಸು ಆಯೋಗ ಈ ಪ್ರಶ್ನೆಗಳನ್ನು

ಕೆಂದ್ರದಿಂದ ರಾಜ್ಯಗಳಿಗೆ ನ್ಯಾಯವಾಗಿ ಸಿಗಬೇಕಾದ್ದು ಸಿಗುತ್ತಿದೆಯೇ? Read More »

ಇಂದು ಪಾಲ್ ಸ್ವೀಜಿಯ ಮರು ಓದಿನ ಜರೂರು ಇದೆ.

ಪಾಲ್ ಮಾರ್ಲರ್ ಸ್ವೀಜಿ ಪ್ರಖ್ಯಾತ ಮಾಕ್ಸ್‌ವಾದಿ ಅರ್ಥಶಾಸ್ತ್ರಜ್ಞ. ಅರ್ಥಶಾಸ್ತ್ರಕ್ಕೆ ಅದರಲ್ಲೂ ವಿಶೇಷವಾಗಿ ಮಾರ್ಕ್ಸ್‌ವಾದಿ ಅರ್ಥಶಾಸ್ತ್ರಕ್ಕೆ ಅವರ ಕೊಡುಗೆ ಅಪಾರ. ಅವರು ಪ್ರಾರಂಭಿಸಿದ ಮಂತ್ಲಿ ರಿವ್ಯೂ ಪತ್ರಿಕೆ ಒಂದು ಎಡಪಂಥೀಯ ವಿಶ್ವಿವಿದ್ಯಾನಿಲಯವೇ ಆಗಿತ್ತು. ಅದರಿಂದ ಪ್ರಭಾವಿತರಾದವರಿಗೆ ಲೆಕ್ಕವೇ ಇಲ್ಲ. ಮಾರ್ಕ್ಸ್‌ನ ಆರ್ಥಿಕ ಚಿಂತನೆಯನ್ನು ಬೆಳೆಸಿದ ಕೆಲವರಲ್ಲಿ ಸ್ವೀಜಿ ಒಬ್ಬರು. ಸ್ವೀಜಿ ಏಪ್ರಿಲ್ ೧೦, ೧೯೧೦ರಲ್ಲಿ ನ್ಯೂಯಾರ್ಕ್ ಪಟ್ಟಣದಲ್ಲಿ ಜನಿಸಿದರು. ಅಸಾಧಾರಣ ಬುದ್ಧಿವಂತ. ’ಗ್ರೀಕ್ ದೇವತೆಗ’ಳನ್ನು ಹೋಲುವ ಸ್ಫುರದ್ರೂಪಿ. ಓದಿದ್ದು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ. ನಂತರ ಆಗ ಬಹುತೇಕ ಜನ ಮಾಡುತ್ತಿದ್ದಂತೆ

ಇಂದು ಪಾಲ್ ಸ್ವೀಜಿಯ ಮರು ಓದಿನ ಜರೂರು ಇದೆ. Read More »

ಅಮೇರಿಕೆಯ ಬಿಕ್ಕಟ್ಟು ಹಾಗೂ ಸುಂಕದ ಮನುಷ್ಯನ ಪ್ರಲಾಪ

  ಯಾನಿಸ್ ವರಾಫಕಿಸ್ ಗ್ರೀಸಿನ ವಿತ್ತಮಂತ್ರಿಗಳಾಗಿದ್ದವರು. ಮಾರ್ಕ್ಸ್‌ವಾದಿ ಅರ್ಥಶಾಸ್ತ್ರಜ್ಞರು. ಅಥೆನ್ಸ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು. ಹಲವು ಪುಸ್ತಕಗಳ ಕರ್ತೃ. ಸಾಮಾಜಿಕ ಮಾಧ್ಯಮಗಳಲ್ಲೂ ತುಂಬಾ ಸಕ್ರಿಯರು. ಟ್ರಂಪ್ ನೀತಿಯನ್ನು ಕುರಿತ ಯಾನಿಸ್ ಅಭಿಪ್ರಾಯಗಳು ಸಾಕಷ್ಟು ಆಸಕ್ತಿಯನ್ನು ಕೆರಳಿಸಿವೆ. ಟ್ರಂಪ್ ಬಫೂನ್ ಅಲ್ಲ. ಅವನ ಕೆಲ ಮಾತುಗಳು, ನಡೆಗಳಿಂದಾಗಿ ಹಾಗೆ ತೋರುತ್ತಾನೆ ಅಷ್ಟೆ. ಯಾನಿಸ್ ದೃಷ್ಟಿಯಲ್ಲಿ ಟ್ರಂಪ್‌ಗೆ ಸ್ಪಷ್ಟ ಯೋಜನೆಗಳಿವೆ. ಅಮೇರಿಕೆಯ ಅರ್ಥಿಕತೆ ಬಿಕ್ಕಟ್ಟಿನಲ್ಲಿದೆ. ಡಾಲರ್ ಗಳಿಸಿರುವ ಪ್ರಾಬಲ್ಯದಲ್ಲೇ ಅದರ ಸಮಸ್ಯೆಯೂ ಮೂಲವೂ ಇದೆ. ಜಾಗತಿಕ ಆರ್ಥಿಕತೆಯಲ್ಲಿ ಡಾಲರ್ ರಾಜ. ಅದು

ಅಮೇರಿಕೆಯ ಬಿಕ್ಕಟ್ಟು ಹಾಗೂ ಸುಂಕದ ಮನುಷ್ಯನ ಪ್ರಲಾಪ Read More »

ಸುಂಕದ ಮನುಷ್ಯನ ಸಲ್ಲದ ಪ್ರಲಾಪಲ

ಟಿ. ಎಸ್. ವೇಣುಗೋಪಾಲ್ ಅಮೇರಿಕೆ ಆಮದು ಮಾಡಿಕೊಳ್ಳುತ್ತಿರುವ ಎಲ್ಲಾ ಸರಕುಗಳ ಮೇಲೆ ಸುಂಕ ಹಾಕಲು ಡೋನಾಲ್ಡ್ ಟ್ರಂಪ್ ಪಣತೊಟ್ಟಿದ್ದಾರೆ. ಅದೇ ಅವರ ಆರ್ಥಿಕ ನೀತಿಯ ಹೃದಯ ಆಗಿದೆ. ಟ್ರಂಪ್ ದೃಷ್ಟಿಯಲ್ಲಿ ಅಮೇರಿಕೆಯ ಎಲ್ಲಾ ಸಮಸ್ಯೆಗಳಿಗೂ ಸುಂಕ ರಾಮಬಾಣ. ಪಾಪ ಜಗತ್ತಿನ ಎಲ್ಲಾ ದೇಶಗಳು ಅಮೇರಿಕೆಗೆ ಅನ್ಯಾಯ ಮಾಡುತ್ತಾ ಬಂದಿವೆಯಂತೆ. ಅಮೇರಿಕೆಯ ವ್ಯಾಪಾರದ ಕೊರತೆ ೧.೨ ಟ್ರಿಲಿಯನ್ ಆಗಿರುವುದು ನೋಡಿದರೆ ತಿಳಿಯುವುದಿಲ್ಲವೇ? ಅದಕ್ಕಿಂತ ದೊಡ್ಡ ಪುರಾವೆ ಬೇಕೇ, ಅನ್ನುತ್ತಾರೆ ಟ್ರಂಪ್. ಸ್ನೇಹಿತರು, ಶತ್ರುಗಳು ಯಾರೂ ಹೊರತಲ್ಲ. ಎಲ್ಲರೂ ಈ

ಸುಂಕದ ಮನುಷ್ಯನ ಸಲ್ಲದ ಪ್ರಲಾಪಲ Read More »

ಹವಾಮಾನದ ತಾಪಮಾನ ಹಾಗೂ ಅಸಮಾನತೆ

ಟಿ ಎಸ್ ವೇಣುಗೋಪಾಲ್ ಭೂಮಿಯ ತಾಪಮಾನ ಏರುತ್ತಿದೆ. ಅದನ್ನು ನಿಯಂತ್ರಿಸಬೇಕು ಅನ್ನುವುದು ಜಗತ್ತಿನ ಎಲ್ಲರ ಕಾಳಜಿ. ಅದಕ್ಕೆ ಫಾಸಿಲ್ ಇಂಧನ ಬಳಕೆ ಬಹುಮಟ್ಟಿಗೆ ಕಾರಣ ಅನ್ನುವುದು ಬಹುಮಟ್ಟಿಗೆ ಒಪ್ಪಿತವಾದ ವಿಷಯ. ಆದರೆ ಅದರ ಬಳಕೆಯನ್ನು ನಿಲ್ಲಿಸುವುದಿರಲಿ ಕಡಿಮೆ ಮಾಡುವುದೂ ಕಷ್ಟದ ಕೆಲಸವಾಗಿದೆ. ಆದರೂ ಎಲ್ಲಾ ದೇಶಗಳು ಇದನ್ನು ಕಡಿಮೆ ಮಾಡಲು ಸಭೆ ಸೇರುತ್ತಲೇ ಇದ್ದಾರೆ. ಅಂತಹ ೨೯ ಸಭೆಗಳು ಈಗ ಮುಗಿದಿವೆ. ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ ಇದ್ದಾರೆ. ಭೂಮಿಯ ತಾಪಮಾನ ೧.೫ ಡಿಗ್ರಿ ಸೆಲ್ಸಿಯಸ್ಸಿಗಿಂತ ಹೆಚ್ಚಾಗಲೂ ಬಿಡುವುದಿಲ್ಲ

ಹವಾಮಾನದ ತಾಪಮಾನ ಹಾಗೂ ಅಸಮಾನತೆ Read More »