RAGAMALA

Annapoorna Devi ಏಕಾಂತಕ್ಕೆ ಸರಿದ ಸುರಬಹಾರ್‌ ನಾದ ಅನ್ನಪೂರ್ಣಾ ದೇವಿ

 ಸುಮಂಗಲಾ ಸರೋದ್‌ ವಾದಕರಾದ ಆಶೀಷ್ ಖಾನ್, ರಾಜೀವ ತಾರಾನಾಥ, ಬಸಂತ್ ಕಾಬ್ರಾ, ಸುರೇಶ್ ವ್ಯಾಸ್, ಪ್ರದೀಪ್ ಬರೋಟ್, ಅಮಿತ್ ಭಟ್ಟಾಚಾರ್ಯ, ಬಾನ್ಸುರಿ ವಾದಕರಾದ ಹರಿಪ್ರಸಾದ್ ಚೌರಾಸಿಯಾ ಮತ್ತು ನಿತ್ಯಾನಂದ ಹಳದೀಪುರ, ಸಿತಾರ್ ವಾದಕರಾದ ನಿಖಿಲ್ ಬ್ಯಾನರ್ಜಿ,ಸುಧೀರ್ ಫಾಡ್ಕೆ, ಸಂಧ್ಯಾ ಫಾಡ್ಕೆ, ಶಾಶ್ವತೀ ಸಹಾ, ಹಿರಿಯ ಹಿಂದೂಸ್ತಾನಿ ಗಾಯಕ ವಿನಯ ಭರತ್‌ ರಾಮ್…‌ ವಿವಿಧ ತಲೆಮಾರಿನ, ವಿಭಿನ್ನ ವಾದ್ಯಗಳ ವಾದಕರಾಗಿದ್ದ ಈ ಎಲ್ಲರಿಗೂ ಸಾಮಾನ್ಯವಾಗಿದ್ದ ಒಂದು ಅಂಶವಿತ್ತು. ಇವರೆಲ್ಲರಿಗೂ ಒಂದಲ್ಲ ಒಂದು ಕಾಲಘಟ್ಟದಲ್ಲಿ ಗುರುವಾಗಿ ಕಲಿಸಿದ್ದು ಅನ್ನಪೂರ್ಣಾ ದೇವಿಯವರು. […]

Annapoorna Devi ಏಕಾಂತಕ್ಕೆ ಸರಿದ ಸುರಬಹಾರ್‌ ನಾದ ಅನ್ನಪೂರ್ಣಾ ದೇವಿ Read More »

Rasoolan Bai, ಅವರೆಲ್ಲರೂ ದೇವಿಯರು ಉಳಿದಿರುವ ಬಾಯಿ ನಾನೊಬ್ಬಳೆ.

ಶೈಲಜಾ   ಇಂದು ಸಂಪೂರ್ಣ ವಿಸ್ಮೃತಿಗೆ ಸರಿದುಹೋಗಿರುವ ರಸೂಲನ್ ಬಾಯಿಯ ಉಲ್ಲೇಖವಿಲ್ಲದೆ ಠುಮ್ರಿಯ ಇತಿಹಾಸವಾಗಲಿ ಅಥವಾ ಬನಾರಸ್ ಶೈಲಿಯ ಠುಮ್ರಿಯ ಪ್ರಸ್ತಾಪವಾಗಲಿ ಪೂರ್ಣವಾಗುವುದೇ ಇಲ್ಲ. ಉತ್ತರಪ್ರದೇಶದ ಮಿರ್ಜ಼ಾಪುರದ ಕಚ್ಛ್ವಾ ಬಜ಼ಾರಿನಲ್ಲಿ ೧೯೦೨ರಲ್ಲಿ ರಸೂಲನ್ ಬಾಯಿ ಜನಿಸಿದರು. ಬಡತನದ ಕುಟುಂಬದಲ್ಲಿ ಶ್ರೀಮಂತ ಸಂಗೀತವಿತ್ತು. ತಾಯಿ ಅದಾಲತ್ ಬಾಯಿ ಒಳ್ಳೆಯ ಗಾಯಕಿ. ರಸೂಲನ್‌ಗೆ ಬಾಲ್ಯದಿಂದಲೇ ಅಭಿಜಾತ ರಾಗಗಳ ಮೇಲೆ ಒಳ್ಳೆಯ ಹಿಡಿತವಿತ್ತು. ನೈನಾದೇವಿ ಮಾಡುವ ಸಂದರ್ಶನದಲ್ಲಿ ತನ್ನ ಬಾಲ್ಯ ಮತ್ತು ಸಂಗೀತವನ್ನು ಕುರಿತು ರಸೂಲನ್ ಬಾಯಿ ಹೇಳಿಕೊಳ್ಳುತ್ತಾರೆ. ನನ್ನ ತಾಯಿ,

Rasoolan Bai, ಅವರೆಲ್ಲರೂ ದೇವಿಯರು ಉಳಿದಿರುವ ಬಾಯಿ ನಾನೊಬ್ಬಳೆ. Read More »

Saraswathi Bai C, ಲೇಡಿ ಭಾಗವತರ್ – ಸಿ ಸರಸ್ವತೀ ಬಾಯಿ

ಶೈಲಜಾ ೧೯ನೇ ಶತಮಾನದ ಕೊನೆಯ ದಶಕ, ೨೦ನೇ ಶತಮಾನದ ಆರಂಭದ ದಶಕಗಳು ಮಹಿಳಾಲೋಕದಲ್ಲಿ ಹಲವು ಬಗೆಯ ತಲ್ಲಣಗಳು ಮತ್ತು ಬದಲಾವಣೆಗಳಿಗೆ ಕಾರಣವಾಯಿತು. ಆಗ ಕೆಲವರು ನೆಲೆಯನ್ನು ಕಳೆದುಕೊಂಡರೆ ಮತ್ತೆ ಕೆಲವರು ಹೊಸ ನೆಲೆಗಳಲ್ಲಿ ತಮ್ಮ ಛಾಪು ಮೂಡಿಸಿದರು. ಸಂಪೂರ್ಣ ಪುರುಷರ ಕ್ಷೇತ್ರವೇ ಆಗಿದ್ದ ಹರಿಕಥಾ ಕಾಲಕ್ಷೇಪ ಹೆಣ್ಣೊಬ್ಬಳು ಅಳಿಸಲಾಗದ ಹೆಜ್ಜೆಗುರುತುಗಳನ್ನು ಮೂಡಿಸಿದ್ದು ಇಂಥದ್ದೊಂದು ಬೆಳವಣಿಗೆ. ಆಕೆಯೇ ಸಿ ಸರಸ್ವತೀಬಾಯಿ. ಈ ಬೆಳವಣಿಗೆಗೆ ಗಂಡಸರು ಸ್ಪಂದಿಸಿದ್ದು ಕೂಡ ತುಂಬಾ ವಿಭಿನ್ನವಾಗಿ, ಸಂಕೀರ್ಣವಾಗಿ ಇತ್ತು. ಹರಿಕಥಾಕ್ಷೇತ್ರ ಅಕ್ಷರಶಃ ’ಹರಿ’ಯ ಅಖಾಡಾ.

Saraswathi Bai C, ಲೇಡಿ ಭಾಗವತರ್ – ಸಿ ಸರಸ್ವತೀ ಬಾಯಿ Read More »

Ponnutai Madhurai, ಮರೆತುಬಿಟ್ಟಿರಾ? ನಾನು ಮಧುರೈ ಪೊನ್ನುತಾಯಿ

ಸಂಗ್ರಹ: ಶೈಲಜ   ಮಧುರೆಯ ಪೊನ್ನುತಾಯಿ ಬಹುಶಃ ನಮಗೆ ಲಭ್ಯವಿರುವ ಇತಿಹಾಸದ ಮೊತ್ತ ಮೊದಲ ನಾಗಸ್ವರವಾದಕಿ. ದೇವದಾಸಿ ಕುಟುಂಬಕ್ಕೆ ಸೇರಿದ ಪೊನ್ನುತಾಯಿಯ ಆಯ್ಕೆಯಿಂದಾಗಿ ಇಂದು ಹಲವು ಮಹಿಳೆಯರು ಆ ಕ್ಷೇತ್ರದಲ್ಲಿ ಹೆಸರು ಮಾಡುವುದಕ್ಕೆ ಸಾಧ್ಯವಾಗಿದೆ. ಆದರೆ ಇಂದು ಸಂಪೂರ್ಣವಾಗಿ ವಿಸ್ಮೃತಿಗೆ ಸರಿದಿರುವ ನಾಗಸ್ವರದ ಮೊದಲಗಿತ್ತಿ ಪೊನ್ನುತಾಯಿಯ ಸಣ್ಣ ಸ್ವಗತ ಇಲ್ಲಿದೆ. ಈ ಸ್ವಗತ ಆನಂದವಿಕಟನ್ ಪತ್ರಿಕೆಗೆ ಅವರು ನೀಡಿದ ಸಂದರ್ಶನ ಮತ್ತು ಹಿಂದು ಪತ್ರಿಕೆಯಲ್ಲಿ ವಿ ಬಾಲಸುಬ್ರಹ್ಮಣ್ಯಂ ಅವರು ಪ್ರಕಟಿಸಿದ ಪೊನ್ನುತಾಯಿಯ ಸಂದರ್ಶನವನ್ನು ಆಧರಿಸಿದೆ. ಪೊನ್ನುತಾಯಿಯವರು ೨೦೦೨ರ

Ponnutai Madhurai, ಮರೆತುಬಿಟ್ಟಿರಾ? ನಾನು ಮಧುರೈ ಪೊನ್ನುತಾಯಿ Read More »

Srikantan R K, ಕಲಾ ತಪಸ್ವಿ ಕ್ರಮಿಸಿದ ಹಾದಿ

ಶೈಲಜಾ ಮತ್ತು ವೇಣುಗೋಪಾಲ್   ೧೯೨೦ರಲ್ಲಿ ಜನವರಿ ೧೪ರ ಸಂಕ್ರಾಂತಿ ಹಬ್ಬದಂದು ಕಾವೇರಿ ತೀರದ ರುದ್ರಪಟ್ಟಣದಲ್ಲಿ, ಏಳು ಸ್ವರಗಳು ಸದಾ ಕಿವಿಯ ಮೇಲೆ ಬೀಳುತ್ತಿದ್ದ ಸಂಗೀತಪ್ರಿಯ ಸಂಕೇತಿ ಕುಟುಂಬದಲ್ಲಿ ಜನಿಸಿ ತಾಯಿ ಸಣ್ಣಕ್ಕನ ಸಂಗೀತಮಯ ಜೋಗುಳಗಳನ್ನು ಕೇಳಿಕೊಂಡೇ ಬೆಳೆದವರು ಶ್ರೀಕಂಠನ್.  ಅವರ ಅಜ್ಜ, ತಂದೆ ಹಾಗೂ ಹಿರಿಯ ಸಹೋದರರೆಲ್ಲರೂ ಸಂಗೀತಕ್ಕಾಗಿ ಶ್ರಮಿಸಿದವರೆ.  ಅವರ ತಾಯಿಯ ತಂದೆ ಬೆಟ್ಟದಪುರ ನಾರಾಯಣಸ್ವಾಮಿಯವರು ವೈಣಿಕರು ಹಾಗೂ ಗಾಯಕರು; ಮೂಗೂರು ಸುಬ್ಬಣ್ಣನವರ ಶಿಷ್ಯರು.  ಶ್ರೀಕಂಠನ್ ಅವರ ತಂದೆ ರುದ್ರಪಟ್ಟಣ ಕೃಷ್ಣಶಾಸ್ತ್ರಿಗಳು ಸಂಗೀತಗಾರರು, ಹರಿಕಥಾವಿದ್ವಾಂಸರು,

Srikantan R K, ಕಲಾ ತಪಸ್ವಿ ಕ್ರಮಿಸಿದ ಹಾದಿ Read More »

Bhanumathi-ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ

ಕಡೂರು ವೆಂಕಟಲಕ್ಷಮ್ಮ ಹುಟ್ಟಿದ್ದು ೨೯, ಮೇ ೧೯೦೬. ಮೈಸೂರು ಶೈಲಿಯ ನೃತ್ಯ ಅದರಲ್ಲೂ ಅಭಿನಯಕ್ಕೆ ತುಂಬಾ ಹೆಸರುವಾಸಿಯಾಗಿದ್ದವರು. ಅವರ ನೃತ್ಯವನ್ನು, ಬದುಕನ್ನು ಅರ್ಥಮಾಡಿಕೊಳ್ಳಬೇಕೆಂದು ಅವರನ್ನು ಬಲ್ಲ ಕೆಲವರನ್ನು ಸಂದರ್ಶಿಸಲು ಪ್ರಾರಂಭಿಸಿದ್ದೆವು. ಅದೇಕೊ ಮುಂದುವರಿಯಲೇ ಇಲ್ಲ. ಇತ್ತೀಚೆಗೆ ನಮ್ಮನ್ನು ಅಗಲಿದ ಭಾನುಮತಿ ಮೇಡಂ ಅನ್ನು ಸಂದರ್ಶಿಸಿದ್ದೆವು. ಅವರು ಒಂದು ಕಾರ್ಯಾಗಾರ ನಡೆಸಿಕೊಡಲು ಗಾನಭಾರತಿಗೆ ಬಂದಿದ್ದಾಗ ಈ ಸಂದರ್ಶನ ಸಾಧ್ಯವಾಯಿತು. ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ. ನೃತ್ಯಕಲಾವಿದೆ, ಗುರು ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ ಸಂದರ್ಶಕರು ಶೈಲಜ ಮತ್ತು ವೇಣುಗೋಪಾಲ್ ಸುಪ್ರಸಿದ್ಧ

Bhanumathi-ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ Read More »

Shivakumar Sharma- ಸಂತೂರ್‌ನ ಸರದಾರ

ಪಂಡಿತ್ ಶಿವಕುಮಾರ್ ಶರ್ಮ ದೀಪಕ್ ರಾಜ   ಸ್ವಾತಂತ್ರ್ಯೋತ್ತರ ಭಾರತದ ಶಾಸ್ತ್ರೀಯ ಸಂಗೀತದ ತೆರೆಯ ಮೇಲೆ ಪ್ರಖರವಾದ ಉಲ್ಕೆಯಂತೆ ಕಾಣಿಸಿಕೊಂಡದ್ದು ಸಂತೂರ್. ಹೇಳಹೆಸರಿಲ್ಲದಂತೆ, ಜನಮಾನಸದಿಂದ ನೇಪಥ್ಯಕ್ಕೆ ಸರಿದುಹೋಗಿದ್ದ ಈ ವಾದ್ಯ ಕೇವಲ ಇಪ್ಪತ್ತೈದು ವರ್ಷಗಳಲ್ಲಿ ಜನಪ್ರಿಯತೆಯ ತುತ್ತತುದಿಗೇರಿತು. ಈಗ ಬಳಕೆಯಿರುವ ವಾದ್ಯಗಳಲ್ಲಿ ಕಡ್ಡಿಯಿಂದ ನುಡಿಸುವ ವಾದ್ಯವೆಂದರೆ ಬಹುಶಃ ಇದೊಂದೇ ಎನಿಸುತ್ತದೆ. ಜಲತರಂಗ್, ಕಾಷ್ಟತರಂಗ್, ತಬಲಾತರಂಗ್ ಮುಂತಾದಂತಹ vertical impact ವಾದ್ಯಗಳಿಗೆ ಹೋಲಿಸಿದರೆ ಸಂತೂರಿನಲ್ಲಿ ನಾದಮಾಧುರ್ಯದ ಸಾಧ್ಯತೆಗಳು ತುಂಬಾ ಹೆಚ್ಚು. ಚರಿತ್ರೆಯಲ್ಲಿ ಎಲ್ಲೋ ಕಳೆದುಹೋಗಿದ್ದ ಈ ವಾದ್ಯವು ಮತ್ತೆ

Shivakumar Sharma- ಸಂತೂರ್‌ನ ಸರದಾರ Read More »

Parama shivan-ಪರಮಶಿವನ್ ಸಂದರ್ಶನ

ಸಂದರ್ಶಿಸಿದವರು – ಎ ರಾಧೇಶ ಮತ್ತು ವೇಣುಗೋಪಾಲ್ ಟಿ ಎಸ್   ನೀವು ನಿಮ್ಮ ಗುರು ದೇವೇಂದ್ರಪ್ಪನವರ ಬಳಿ ಕಲಿತದ್ದರ ಬಗ್ಗೆ ಹೇಳಿ. ನಿಮಗೆ ಸಂಗೀತದ ಗೀಳು ಹತ್ತಿದ್ದರ ಬಗ್ಗೆ ಹೇಳಿ. ಚಾಮುಂಡೇಶ್ವರಿ ಕಂಪನಿಯಲ್ಲಿ ಬಾಲಕನ ಪಾತ್ರ ಮಾಡ್ತಾ ಇದ್ದೆ. ನಾಲ್ಕೈದು ವರ್ಷ. ಕಂಠ ಚೆನ್ನಾಗಿತ್ತು ಅಂತ ಹಾರ್ಮೋನಿಯಂ ಮೇಷ್ಟ್ರು ಸರಿಗಮ ಶುರುಮಾಡಿದ್ರು. ಸರಳೆ ಜಂಟಿ ಅಲಂಕಾರ ಎಲ್ಲವನ್ನೂ ಪಾಠ ಮಾಡಿ, ಅಕಾರ ಉಕಾರಗಳಲ್ಲಿ ಹಾಡಿಸೋರು. ಅಂಕಾರ ಕಷ್ಟ ಅಂತ ಅಂಕಾರ ಮಾಡಿಸೋರು. ಬಾಯಿ ಮುಚ್ಚಿಕೊಂಡು ಮಾಡಬೇಕಿತ್ತು.

Parama shivan-ಪರಮಶಿವನ್ ಸಂದರ್ಶನ Read More »

Rajan Mishra-ಮೌನವಾದ ಬನಾರಸ್ ಪರಂಪರೆಯ ಚಿನ್ನದ ಧ್ವನಿ.

ಪಂಡಿತ್ ರಾಜನ್ ಮಿಶ್ರ ಇನ್ನಿಲ್ಲ. ಜಗತ್ತನ್ನು ಮೋಡಿ ಮಾಡಿದ ಮಿಶ್ರ ಸಹೋದರರಲ್ಲಿ ಒಬ್ಬರನ್ನು ಕೊರೋನ ಬಲಿ ತೆಗೆದುಕೊಂಡಿದೆ. ಇದು ಸಂಗೀತಕ್ಷೇತ್ರಕ್ಕೆ ಒಂದು ದೊಡ್ಡ ಆಘಾತ. ಬನಾರಸ್ ಘರಾನೆಯ ಅಪ್ರತಿಮ ಸಂಗೀತಗಾರನ್ನು ಸಂಗೀತ ಕ್ಷೇತ್ರ ಕಳೆದುಕೊಂಡಿದೆ. ವಾರಣಾಸಿಯ ಸಂಗೀತದ ಮನೆತನದಲ್ಲಿ ರಾಜನ್ ಮಿಶ್ರ ಜನಿಸಿದ್ದು ೧೯೫೧ರಲ್ಲಿ, ಹನುಮಾನ್ ಜಯಂತಿಯಂದು. ಅವರದ್ದು ಬನಾರಸ್ ಘರಾನೆ. ಖಯಾಲ್ ಗಾಯನ ಅಂದರೆ ಹೀಗಿರಬೇಕು ಎಂದು ವ್ಯಾಖ್ಯಾನಿಸಿದ ಘರಾನೆ ಅದು. ನೇಪಾಳದ ಅಸ್ಥಾನ ವಿದ್ವಾಂಸರಾಗಿದ್ದ ಗಾಯನಾಚಾರ್ಯ ಬಡೇ ರಾಂದಾಸ್ ಮಿಶ್ರ ಅದರ ಪ್ರವರ್ತಕರು. ರಾಂದಾಸ್

Rajan Mishra-ಮೌನವಾದ ಬನಾರಸ್ ಪರಂಪರೆಯ ಚಿನ್ನದ ಧ್ವನಿ. Read More »

Venkatappa K -ಕುಂಚ ಹಿಡಿದ ಕೈ ಮೀಟಿದ ತಂತಿ

[ಕೆ ವೆಂಕಟಪ್ಪನವರು ಹೆಸರಾಂತ ಕಲಾವಿದರು, ಶಿಲ್ಪಕಲಾವಿದರು. ಅವರಿಗೆ ಅಷ್ಟೇ ಪರಿಶ್ರಮ ಸಂಗೀತದಲ್ಲಿಯೂ ಇತ್ತು. ವೀಣೆಯನ್ನು ಶೇಷಣ್ಣನವರ ಬಳಿ ಕಲಿತಿದ್ದರು. ಶಾಸ್ತ್ರದ ತಿಳುವಳಿಕೆಯೂ ಇತ್ತು. ಅವರ ಸಂಗೀತದ ಆಯಾಮದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅವರು ವೇದಿಕೆ ಕಲಾವಿದರಾಗಲು ಕಲಿತವರಲ್ಲ. ಆತ್ಮಸಂತೋಷಕ್ಕಾಗಿ ನುಡಿಸಿಕೊಳ್ಳುತ್ತಿದ್ದವರು. ವಿ ಸೀತಾರಾಮಯ್ಯ, ಎಸ್ ಕೆ ರಾಮಚಂದ್ರರಾಯರು ಅವರ ಸಂಗೀತದ ಬಗ್ಗೆ ಬರೆದಿದ್ದಾರೆ. ಅವರನ್ನು ನಿಕಟವಾಗಿ ಬಲ್ಲ ಬಿ ಜಿ ಎಲ್ ಸ್ವಾಮಿಯವರು ಒಂದು ಸೊಗಸಾದ ಲೇಖನವನ್ನು ಬರೆದಿದ್ದಾರೆ. ಜೊತೆಗೆ ವೆಂಕಟಪ್ಪನವರ ಡೈರಿಯು ವೆಂಕಟಪ್ಪ: ಸಮಕಾಲೀನ ಪುನರವಲೋಕನ

Venkatappa K -ಕುಂಚ ಹಿಡಿದ ಕೈ ಮೀಟಿದ ತಂತಿ Read More »